ಚಿರಂಜೀವಿ ಸರ್ಜಾ ಹನ್ನೊಂನೇ ದಿನದ ಕಾರ್ಯ ಇಂದು

ಬುಧವಾರ, 17 ಜೂನ್ 2020 (09:00 IST)
ಬೆಂಗಳೂರು: ಅಕಾಲಿಕವಾಗಿ ನಿಧನರಾದ ಚಿರಂಜೀವಿ ಸರ್ಜಾರ ಹನ್ನೊಂದನೇ ದಿನದ ಕಾರ್ಯಕ್ರಮ ಇಂದು ನೆಲಗುಳಿಯ ಫಾರಂ ಹೌಸ್ ನಲ್ಲಿ ನಡೆಯಲಿದೆ.


ಚಿರು ಸರ್ಜಾ ಅಂತಿಮ ಕಾರ್ಯದಲ್ಲಿ ಸಾಕಷ್ಟು ಜನ ಸೇರಿದ್ದರು. ಹೀಗಾಗಿ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ. ಆದರೆ ಈ ಬಾರಿ ಹೀಗಾಗದಂತೆ ಕುಟುಂಬವರ್ಗ ನೋಡಿಕೊಂಡಿದೆ. ಇದಕ್ಕಾಗಿ ಮಾಧ‍್ಯಮ ಪ್ರತಿನಿಧಿಗಳಿಗೆ ಆಹ್ವಾನವಿದ್ದರೂ ಕ್ಯಾಮರಾ ತೆಗೆದುಕೊಂಡು ಬಾರದಂತೆ ಚಿರು ಮಾವ ಅರ್ಜುನ್ ಸರ್ಜಾ ಮನವಿ ಮಾಡಿದ್ದಾರೆ.

ಇಂದಿನ ದಿನದ ಕಾರ್ಯಕ್ರಮದಲ್ಲಿ ಕೇವಲ ಕುಟುಂಬಸ್ಥರು ಮತ್ತು ಆಪ್ತರಿಗಷ್ಟೇ ಅವಕಾಶ ನೀಡಲಾಗಿದೆ. ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ