ಮಾನಸಿಕ ಖಿನ್ನತೆ ಬಗ್ಗೆ ಅಲರ್ಟ್ ಆದ ಸ್ಯಾಂಡಲ್ ವುಡ್ ತಾರೆಯರು

ಬುಧವಾರ, 17 ಜೂನ್ 2020 (08:51 IST)
ಬೆಂಗಳೂರು: ಸುಶಾಂತ್ ಸಿಂಗ್ ರಜಪೂತ್ ಎಂಬ ಬಾಲಿವುಡ್ ತಾರೆ ಮಾನಸಿಕ ಖಿನ್ನತೆಗೊಳಗಾಗಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳಿಕ ಸ್ಯಾಂಡಲ್ ವುಡ್ ನಟರು ಎಚ್ಚೆತ್ತುಕೊಂಡಿದ್ದಾರೆ.


ಮೂರು ತಿಂಗಳ ಲಾಕ್ ಡೌನ್ ಅವಧಿಯಲ್ಲಿ ಕೆಲಸವಿಲ್ಲದೇ ಕೂತಿದ್ದಾಗ ಭವಿಷ್ಯದ ಬಗ್ಗೆ ಅಭದ್ರತೆ, ಮುಂದೆ ಅವಕಾಶಗಳು ಸಿಗದೇ ಇದ್ದರೇ ಎಂಬ ಆತಂಕದಲ್ಲಿ ಕಲಾವಿದರೂ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇದು ಖಿನ್ನತೆಗೆ ದಾರಿ ಮಾಡಿಕೊಡುತ್ತದೆ.

ಹೀಗಾಗಿ ಏನೇ ಕಷ್ಟಗಳಿದ್ದರೂ ಪರಸ್ಪರ ಹಂಚಿಕೊಳ್ಳೋಣ. ಮುಂದೊಂದು ದಿನ ಉತ್ತಮ ದಿನಗಳು ಬಂದೇ ಬರುತ್ತವೆ ಎಂಬ ನಂಬಿಕೆಯಲ್ಲಿರೋಣ. ಮಾನಸಿಕವಾಗಿ ಹೆಚ್ಚು ಸಬಲರಾಗೋಣ ಎಂದು ಹೆಚ್ಚಿನ ನಟ-ನಟಿಯರು ಈಗ ಸಾಮಾಜಿಕ ಜಾಲತಾಣದ ಮೂಲಕ ಕರೆ ಕೊಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ