ನಿಖಿಲ್ ಎಂಗೇಜ್ ಮೆಂಟ್ ಗೆ ಬಂದ ಸಿಎಂ: ಯಡಿಯೂರಪ್ಪಗೆ ಖುದ್ದು ಸ್ವಾಗತ ನೀಡಿದ ಎಚ್ ಡಿಕೆ

ಸೋಮವಾರ, 10 ಫೆಬ್ರವರಿ 2020 (13:07 IST)
ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಹಾಜರಾಗಿದ್ದಾರೆ.

 
ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಅನೇಕ ರಾಜಕೀಯ ಗಣ್ಯರು ಪಕ್ಷ ಬೇಧ ಮರೆತು ಆಗಮಿಸಿದ್ದಾರೆ.

ಅದರಲ್ಲೂ ಸಿಎಂ ವೇದಿಕೆ ಬಂದಾಗ ಸ್ವತಃ ಕುಮಾರಸ್ವಾಮಿಯವರೇ ಖುದ್ದಾಗಿ ಸ್ವಾಗತಿಸಿದ್ದಲ್ಲದೆ, ನವ ವಧು-ವರನನ್ನು ಪರಿಚಯಿಸಿದ್ದು ಕಂಡುಬಂತು. ಸಿಎಂ ಜತೆ ಸಚಿವ ಆರ್ ಅಶೋಕ್ ಕೂಡಾ ಆಗಮಿಸಿದ್ದರು. ಇನ್ನು, ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಸಚಿವ ಕೆಎಸ್ ಈಶ್ವರಪ್ಪ ಕೂಡಾ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದರು. ಇನ್ನೂ ಅನೇಕ ರಾಜಕೀಯ, ಸ್ಯಾಂಡಲ್ ವುಡ್ ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ