ಬೆಂಗಳೂರು: ದರ್ಶನ್ ಫ್ಯಾನ್ಸ್ ಹಾಗೂ ನಟಿ ರಮ್ಯಾ ನಡುವಿನ ಜಟಾಪಟಿ ಇದೀಗ ಠಾಣೆ ಮೆಟ್ಟಿಲೇರಿದೆ. ನಟನ ಫ್ಯಾನ್ಸ್ ವಿರುದ್ಧ ರಮ್ಯಾ ಅವರು ಕಮಿಷನರ್ಗೆ ಲಿಖಿತವಾಗಿ ದೂರು ನೀಡಿದ್ದಾರೆ.
ರೇಣುಕಾಸ್ವಾಮಿ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ವಿಚಾರಣೆಯ ಪೋಸ್ಟ್ ಮಾಡಿ, ಈ ಮೂಲಕ ಸಾಮಾನ್ಯ ಪ್ರಜೆಗೂ ನ್ಯಾಯ ಸಿಗುವ ನಂಬಿಕೆಯಿದೆ ಎಂಬ ವಿಚಾರವನ್ನು ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಈ ವಿಚಾರ ದರ್ಶನ್ ಫ್ಯಾನ್ಸ್ ಕೋಪಕ್ಕೆ ಕಾರಣವಾಯಿತು. ಆ ಬಳಿಕ ರಮ್ಯಾ ಅವರನ್ನು ಟ್ರೋಲ್ ಮಾಡಲಾಯಿತು. ಇದರಿಂದ ನಟಿಗೆ ದರ್ಶನ್ ಫ್ಯಾನ್ಸ್ಯಿಂದ ಅಶ್ಲೀಲವಾದ ಮೆಸೇಜ್ಗಳನ್ನು ಹಾಕಲಾಯಿತು.
ಅದೆಲ್ಲವನ್ನೂ ನಟಿ ತನ್ನ ಇನ್ಸ್ಟಾಗ್ರಾಂನಲ್ಲಿ ಹಮಚಿಕೊಂಡಿದ್ದರು. ಈ ವಿಚಾರ ತಾರಕಕ್ಕೇರುತ್ತಿದ್ದ ಹಾಗೇ ಇದೀಗ ನಟಿ ಪೊಲೀಸ್ ಕಮಿಷನರ್ಗೆ ದೂರು ನಿಡಿದ್ದಾರೆ.
ಈ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ರಮ್ಯಾ ಅವರು ನಾನೊಂದು ಸೆಲೆಬ್ರಿಟಿಯಾಗಿ ನನಗೆ ಈ ರೀತಿ ಮೆಸೇಜ್ ಮಾಡುತ್ತಿದ್ದಾರೆ ಅಂದರೆ ಇನ್ನೂ ಸಾಮಾನ್ಯ ಮಹಿಳೆಯರಿಗೆ ಎಷ್ಟೂ ಕೆಟ್ಟದಾಗಿ ಇವರು ಮೆಸೇಜ್ ಮಾಡಿರ್ಬೋದು. ಈ ಹಿನ್ನೆಲೆ ನಾನು ದೂರು ನೀಡಿದ್ದೇನೆ ಎಂದರು.