ದರ್ಶನ್‌ ಅವರು ಆಚೆ ಬಂದ್ಮೇಲೆ ದುಪ್ಪಟ್ಟು ಮೆರೆಸಬೇಕು: ಹುಲಿ ಕಾರ್ತಿಕ್

Sampriya

ಶುಕ್ರವಾರ, 20 ಸೆಪ್ಟಂಬರ್ 2024 (18:19 IST)
Photo Courtesy X
ಸದ್ಯ ದರ್ಶನ್ ಅವರ ಸಮಯ ಒಳ್ಳೇದಿಲ್ಲ, ಅವರು ಈ ಎಲ್ಲ ಸಂಕಷ್ಟಗಳನ್ನು ಗೆದ್ದು ಹೊರಬಂದು ಮತ್ತೇ ತೆರೆ ಮೇಲೆ ಮಿಂಚುತ್ತಾರೆ ಎಂದು ಗಿಚ್ಚಿಗಿಲಿ ವಿನ್ನರ್ ಹುಲಿ ಕಾರ್ತಿಕ್ ಹೇಳಿದರು.

'ಗಿಚ್ಚಿ ಗಿಲಿಗಿಲಿ' ಕಾರ್ಯಕ್ರಮದ ಗೆಲುವಿನ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರತಿಕ್ರಿಯಿಸಿದರು.

ಸದ್ಯ ಬಿಂದಿಗೆಯಲ್ಲಿ ತಳದಲ್ಲಿರುವ ನೀರಿನಂತೆ ಇರುವ ದರ್ಶನ್‌ ಅವರಿಗೆ ಕಾಗೆ ಹಾಕುವ ಒಂದೊಂದೆ ಕಲ್ಲಿನಂತ್ತೆ ಒಬ್ಬೊಬ್ಬರೆ ಪೆಟ್ಟು ಕೊಡುತ್ತಿದ್ದಾರೆ. ಆದರೆ ನೀರು ಮೇಲೆ ಬಂದ ಹಾಗೇ ದರ್ಶನ್ ಅವರು ಕೂಡಾ ಇದರಿಂದ ಹೊರಬಂದು ಮಿಂಚುತ್ತಾರೆ ಎಂದು ಹೇಳಿದರು.

ದರ್ಶನ್ ಅವರಿಗೆ ಏನು ಆಗಬಾರದು.  ಅವರ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 'ಮೆಜೆಸ್ಟಿಕ್'ನಿಂದ ಹಿಡಿದು 'ರಾಬರ್ಟ್‌'ವರೆಗೂ ಹೇಗೆ ಕುಣಿಸಿದರೋ ಹಾಗೇ ಅವರು ಬಂದ್ಮೇಲೆ ದುಪ್ಪಟ್ಟು ಅವರನ್ನು ಮೆರೆಸಬೇಕು. ನಾನೊಬ್ಬ ದರ್ಶನ್ ಅಭಿಮಾನಿಯಾಗಿ ಆಸೆ ಎಂದು ಮಾತನಾಡಿದ್ದಾರೆ.

ಸರ್ ತುಂಬಾನೇ ಡೌನ್‌ ಟು ಅರ್ಥ್‌. ನನ್ನನ್ನು ಟಗರು ಪಲ್ಯ ಸಿನಿಮಾ ಟ್ರೇಲರ್ ಲಾಂಚ್ ವೇಳೆ ಗುರುತಿಸಿ,  ಹುಲಿ ಕಾರ್ತಿಕ್ ಅಲ್ವಾ, ನಾನು ನಿಮ್ಮ ನಟನೆ ಶೋನಲ್ಲಿ ನೋಡಿದ್ದೀನಿ ಒಳ್ಳೆಯದಾಗಲಿ ಎಂದು ಹಾರೈಸಿದ್ದರು. ನಟನೆ ಚೆನ್ನಾಗಿದೆ ಎಂದು ಹೇಳುವ ದೊಡ್ಡ ಗುಣ ಅವರಿಗೆ ಎಂದು ಕಾರ್ತಿಕ್ ಸ್ಮರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ