ವಿಜಯಲಕ್ಷ್ಮಿ ಮುಖದಲ್ಲಿ ನಗು ನೋಡಿ ದರ್ಶನ್‌ಗೆ ಬೇಲ್ ಪಕ್ಕಾ ಎಂದ ಡಿ ಫ್ಯಾನ್ಸ್‌

Sampriya

ಮಂಗಳವಾರ, 17 ಸೆಪ್ಟಂಬರ್ 2024 (19:06 IST)
ಬಳ್ಳಾರಿ:  ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಅವರು ಇಂದು ಭೇಟಿಯಾಗಿ ಮುಂದಿನ ಕಾನೂನು ಹೋರಾಟದ ಬಗ್ಗೆ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅವರನ್ನು ಹೊರತರಲು ವಿಜಯಲಕ್ಷ್ಮೀ ಕಾನೂನು ಹೋರಾಟದ ಜತೆಗೆ ದೇವರ ಮೊರೆ ಹೋಗುತ್ತಿದ್ದಾರೆ.

ದರ್ಶನ್‌ ಭೇಟಿಗೆ ಬರುವ ವೇಳೆ ವಿಜಯಲಕ್ಷ್ಮೀ ಅವರು ದೇವರ ಪ್ರಸಾದಗಳನ್ನು ತರುತ್ತಿದ್ದಾರೆ. ಇಂದು ಪತ್ನಿಯನ್ನು ಭೇಟಿಯಾಗಲು ಸಂದರ್ಶಕರ ಕೊಠಡಿಗೆ ನಗುಮುಖದಲ್ಲೇ ನಟ ದರ್ಶನ್ ಬಂದಿದ್ದಾರೆ.

ಈ ವೇಳೆ ಹಿಂದೆ ನೀಡಿದ ಎರಡು ಬ್ಯಾಗ್‌ ಅನ್ನು ದರ್ಶನ್ ಅವರು ವಾಪಾಸ್ಸು ನೀಡಿದ್ದಾರೆ. ಇನ್ನೂ ದರ್ಶನ್ ಭೇಟಿಗೆ ಬಂದ ವಿಜಯಲಕ್ಷ್ಮೀ ಅವರು ಹಣ್ಣು, ಡ್ರೈ ಫ್ರೂಟ್ಸ್‌, ಟೂತ್‌ ಫೇಸ್ಟ್‌, ಬಿಸ್ಕೆಟ್‌ ಹಾಗೂ ಬಟ್ಟೆ ತಂದಿದ್ದಾರೆ.

ಇನ್ನೂ ಪತಿಯನ್ನು ಭೇಟಿಯಾಗಿ ಹೊರಬರುತ್ತಿದ್ದಾಗ ವಿಜಯಲಕ್ಷ್ಮೀ ನಗು ಬೀರಿದ್ದಾರೆ. ಅದಲ್ಲದೆ ಪತ್ನಿ ಭೇಟಿಗೆ ಬಂದಾಗ ದರ್ಶನ್ ಕೂಡಾ ರಿಲ್ಯಾಕ್ಸ್‌ ಆಗಿ ನಗುವಿನೊಂದಿಗೆ ಸಂದರ್ಶಕರ ಕೊಠಡಿಗೆ ಬಂದಿದ್ದಾರೆ. ಇದನ್ನು ನೋಡಿದ ಡಿ ಫ್ಯಾನ್ಸ್‌ ದರ್ಶನ್‌ಗೆ ಜಾಮೀನು ಪಕ್ಕಾ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ