ಮಗ-ಸೊಸೆ ವಿಚ್ಛೇದನಕ್ಕೆ ಕಾರಣ ತಿಳಿಸಿದ ಧನುಷ್ ತಂದೆ

ಗುರುವಾರ, 20 ಜನವರಿ 2022 (11:04 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಐಶ್ವರ್ಯಾ ಮತ್ತು ನಟ ಧನುಷ್ ವಿಚ್ಛೇದನ ಸುದ್ದಿ ಭಾರೀ ಸುದ್ದಿಯಲ್ಲಿದೆ. ಇವರಿಬ್ಬರ ನಡುವಿನ ವಿರಸಕ್ಕೆ ಕಾರಣವೇನೆಂದು ಧನುಷ್ ತಂದೆ ಪ್ರತಿಕ್ರಿಯಿಸಿದ್ದಾರೆ.

ಮಗ-ಸೊಸೆಯ 18 ವರ್ಷದ ದಾಂಪತ್ಯ ಜೀವನ ಕೊನೆಗಾಣುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಧನುಷ್ ತಂದೆ ಕಸ್ತೂರಿ ರಾಜ ಇದು ಮಾಮೂಲು ಗಂಡ-ಹೆಂಡತಿ ಜಗಳವಷ್ಟೇ ಎಂದಿದ್ದಾರೆ.

‘ಧನುಷ್, ಐಶ್ವರ್ಯಾ ನಡುವೆ ನಡೆದಿರುವುದು ಮಾಮೂಲು ಗಂಡ-ಹೆಂಡತಿ ಜಗಳವಷ್ಟೇ. ಇದೆಲ್ಲಾ ಸರಿ ಹೋಗುತ್ತದೆ ಎಂದುಕೊಂಡಿದ್ದೇನೆ. ಸದ್ಯಕ್ಕೆ ಇಬ್ಬರೂ ಹೈದರಾಬಾದ್ ನಲ್ಲಿದ್ದಾರೆ. ಇಬ್ಬರ ಜೊತೆಯೂ ಮಾತನಾಡಿ ಕೆಲವು ಸಲಹೆ ಕೊಟ್ಟಿದ್ದೇನೆ’ ಎಂದು ಕಸ್ತೂರಿ ರಾಜ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ