ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಟೈಟಲ್ ವಿವಾದಕ್ಕೆ ನಿರ್ದೇಶಕರ ಸ್ಪಷ್ಟನೆ

ಸೋಮವಾರ, 24 ಜನವರಿ 2022 (08:35 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಅಭಿನಯಿಸಲಿರುವ ಹೊಸ ಸಿನಿಮಾ ‘ಯದುವೀರ’ ಟೈಟಲ್ ಮೊನ್ನೆ ಲಾಂಚ್ ಆಗಿತ್ತು.

ಈ ಹೆಸರು ಕೇಳಿದ ತಕ್ಷಣ ಮೈಸೂರಿನ ರಾಜ ಯದುವೀರ್ ಹೆಸರು ನೆನೆಪಿಗೆ ಬರುವುದು ಸಹಜ. ಹಾಗಿದ್ದರೆ ಈ ಸಿನಿಮಾ ಮೈಸೂರು ಅರಸರ ಕುರಿತಾಗಿ ಇದೆಯಾ ಎಂಬ ಅನುಮಾನಗಳು ಅಭಿಮಾನಿಗಳಲ್ಲಿತ್ತು. ಇದಕ್ಕೀಗ ನಿರ್ದೇಶಕ ಮಂಜು ಅಥರ್ವ ತೆರೆ ಎಳೆದಿದ್ದಾರೆ.

ಸಿನಿಮಾ ಟೈಟಲ್ ಗೂ ಮೈಸೂರು ಅರಸರಿಗೂ ಸಂಬಂಧವಿಲ್ಲ. ಆದರೆ ಸಿನಿಮಾ ನೋಡಿದ ಮೇಲೆ ನಿಮಗೆ ಆ ಟೈಟಲ್ ಯಾಕಿಟ್ಟಿದ್ದೇವೆ ಎಂಬುದು ಗೊತ್ತಾಗಲಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ