ವಿದಾಯ ಹೇಳಲು ಸಿದ್ಧ ಆಗ್ತಾ ಇದ್ದಾರೆ ಪ್ರಸಿದ್ಧ ನಿರ್ದೇಶಕ ಪಿ ಶೇಷಾದ್ರಿ..

ಸೋಮವಾರ, 20 ಅಕ್ಟೋಬರ್ 2014 (13:33 IST)
ಪಿ ಶೇಷಾದ್ರಿ ಅವರು ನಿರ್ದೇಶನ ಚಿತ್ರ ಈಗ ಮತ್ತೆ ಸೆಟ್ಟೇರಿದೆ. ಸಾಕಷ್ಟು ವಿಶೇಷತೆ ಇರುವ ಶೇಷಾದ್ರಿ ಅವರ ಚಿತ್ರ ಭಿನ್ನತೆಯನ್ನು ಸೃಷ್ಟಿಸುತ್ತಿದೆ ತನ್ನ ವಿಶಿಷ್ಟತೆಯಿಂದ. ತಮ್ಮ ಹಿರಿ ಸಹೋದ್ಯೋಗಿಯಾದ  ಪದ್ಮಶ್ರೀ ಡಾ. ಗಿರೀಶ್ ಕಾಸರವಳ್ಳಿ ಅವರ ಹಾದಿಯಲ್ಲಿ ನಡೆಯುತ್ತಿದ್ದಾರೆ 
 
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ ಶೇಷಾದ್ರಿ ಅವರು. ಕನ್ನಡ ಚಿತ್ರರಂಗದ ವಿನೂತನ ನಿರ್ದೇಶಕ ಎನ್ನುವ ಅಗ್ಗಳಿಕೆ ಪಡೆದಿರುವ ಪಿ ಶೇಷಾದ್ರಿ ಅವರು ಬಸಂತ್ ಕುಮಾರ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ವಿದಾಯ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. 
 
ಇತ್ತೀಚೆಗಷ್ಟೇ ಈ ಸಿನಿಮಾದ ಮುಹೂರ್ತ  ನಡೆಯಿತು.  ಈಗಾಗಲೇ ಶೇಷಾದ್ರಿ ಅವರ ಬೆಟ್ಟದ ಹೂ  ಉತ್ತಮ ಪರಿಸರ ಪ್ರಜ್ಞೆ ಹೊಂದಿರುವ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿ ಗಳಿಸಿತು. ಬಳಿಕ ಇವರ ನಿರ್ದೇಶನದ ಮತ್ತೊಂದು ಚಿತ್ರ ಭಾರತ ಸ್ಟೋರ್ಸ್ ಗೆ  ಅತ್ಯುತ್ತಮ ಪ್ರಾದೇಶಿಕ ಚಿತ್ರ  ರಾಷ್ಟ್ರೀಯ ಪ್ರಶಸ್ತಿ ದೊರಕಿತು. ಡಿಸೆಂಬರ್ 1  ಚಿತ್ರಕ್ಕೆ ಸಹಿತ ಅತ್ಯುತ್ತಮ ಪ್ರಾದೇಶಿಕ ಚಿತ್ರವೆನ್ನುವ ಅಗ್ಗಳಿಕೆಯಿಂದ  ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಈಗ ವಿದಾಯ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ ಶೇಷಾದ್ರಿ. 
 

ವೆಬ್ದುನಿಯಾವನ್ನು ಓದಿ