ವಿಷ್ಣುವರ್ಧನ್ ಖೈದಿ ಹಾಗೂ ಚಾಂದಿನಿ ಖೈದಿ ಬೇರೆ ಬೇರೆ ಅಂತಾರೆ ನಿರ್ದೇಶಕ

ಬುಧವಾರ, 24 ಡಿಸೆಂಬರ್ 2014 (09:20 IST)
ನಿರ್ದೇಶಕ ಗುರುದತ್  ಅವರ ಬಹು ನಿರೀಕ್ಷೆಯ ಚಿತ್ರ ಖೈದಿ. ಈ ಚಿತ್ರದಲ್ಲಿ ಎ ಚಿತ್ರದ ನಾಯಕಿ ಆಗಿದ್ದ ಚಾಂದಿನಿ ನಟಿಸುತ್ತಿದ್ದಾಳೆ. ಖೈದಿ ಹೆಸರಿನ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಅವರು ನಟಿಸಿದ್ದರು. ಅದು ಸೂಪರ್ ಹಿಟ್ ಆಗಿತ್ತು  . ಆ ಚಿತ್ರದ ನಂತರ  ಈಗ ಅದೂ ಬಹಳ ವರ್ಷಗಳ ಬಳಿಕ ಹೊಸ ಖೈದಿ ಬರುತ್ತಿದೆ. ಇದರ ಬಗ್ಗೆ ನಿರ್ದೇಶಕ   ಗುರು ದತ್ ಹೇಳೋದಿಷ್ಟೇ ಇದು ಭಿನ್ನ ಕಥೆಯನ್ನು ಹೊಂದಿದೆ. 
ಆ ಖೈದಿ ಮತ್ತು ಈ ಖೈದಿ ಎರಡು ಬೇರೆ ಬೇರೆ. ಆದರೆ ಅಂತಿಮವಾಗಿ ಒಂದಷ್ಟು ಹೋಲಿಕೆ ಇದೆ. ಇದರ ಟ್ಯಾಗ್ ಲೈನ್ ನಲ್ಲಿ  ಸಿಸ್ಟಂ ಎರರ್ ಎನ್ನುವುದು  ಇದೆಯಂತೆ. ಅಂದ್ರೆ ಇನ್ನೇನು ಶುಭಂ ಹೇಳೋ ಸಮಯ ಹತ್ತಿರ ಆದಾಗ ಮಾತ್ರ ಹೋಲಿಕೆ ಇದೆ ಎಂದಾಯಿತು.ಇದು ನಮ್ಮ ಉಪಸಂಹಾರವಲ್ಲ, ಆ ಬಗ್ಗೆ ಗುರುದತ್ ಹೇಳಿದ್ದಾರೆ. 
 
ಈ ಕಥೆಯು ಸಮಾಜದ ವಸ್ತುಸ್ಥಿತಿಯನ್ನು ಆಧರಿಸಿದೆಯಂತೆ. ಈ ಚಿತ್ರದಲ್ಲಿ ಸತ್ಯ ಘಟನೆಗಳನ್ನು ಆಧರಿಸಿರುವ ಅಂಶಗಳು ಇವೆಯಂತೆ. ಯಾವರೀತಿ ರಾಜಕೀಯಮತ್ತು ನ್ಯಾಯಾಂಗ ಸಾಮಾನ್ಯರ ಬದುಕಿನ ಮೇಲೆ ಯಾವ ರೀತಿಯಲ್ಲಿ ಆತ ಆಡುತ್ತಾರೆ ಎನ್ನುವ ಅಂಶವನ್ನು ಆಧರಿಸಿದೆ ಎಂದು ಹೇಳಿದ್ದಾರೆ. ಧನುಷ್ ಇದರಲ್ಲಿ ಮುಖ್ಯ ಪಾತ್ರಧಾರಿ ಆಗಿದ್ದಾರೆ.ಈ ಚಿತ್ರದ ಮೂಲಕ ಮತ್ತೆ ಚಂದನವನಕ್ಕೆ ಹಿಂತಿರುಗಿದ್ದಾಳೆ ಚಾಂದಿನಿ. 

ವೆಬ್ದುನಿಯಾವನ್ನು ಓದಿ