ಆದರೆ ಕೋರ್ಟ್ ನಾಗರತ್ನ ಅವರಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ನಾಗರತ್ನ ದುನಿಯಾ ವಿಜಿ ನಿವಾಸದ ಹತ್ತಿರ ಹೋಗುವಂತಿಲ್ಲ, ಅವರ ಮನೆ ಎದುರು ಹೋಗಿ ಜಗಳವಾಡುವಂತಿಲ್ಲ, ಸ್ಕೂಲ್ ಬಳಿ ಹೋಗಿ ಮಕ್ಕಳನ್ನು ಮಾತನಾಡಿಸುವಂತಿಲ್ಲ ಮತ್ತು ವಿಜಿ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ನೀಡುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ.
ನಾಗರತ್ನರವರು ತಮಗೆ ತಿಂಗಳಿಗೆ 60 ಸಾವಿರ ರೂಪಾಯಿ ಜೀವನಾಂಶ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಆದರೆ ದುನಿಯಾ ವಿಜಿಯವರು ತಾನು ಅಷ್ಟು ಹಣ ನೀಡಲು ಸಮರ್ಥನಲ್ಲ, ಈ ಮೊತ್ತವನ್ನು ತಗ್ಗಿಸಬೇಕು ಎಂದು ನ್ಯಾಯಾಧೀಶರಲ್ಲಿ ಕೇಳಿಕೊಂಡಿದ್ದರು. ಅವರ ಮನವಿಯನ್ನು ಪುರಷ್ಕರಿಸಿರುವ ಕೋರ್ಟ್ 30.000 ರೂಪಾಯಿ ಜೀವನಾಂಶವನ್ನು ನೀಡುವಂತೆ ಆದೇಶಿಸಿದೆ.