ದುನಿಯ ವಿಜಿ ಪಾನಿಪುರಿ ಕಿಟ್ಟಿ ಗಲಾಟೆ

ಮಂಗಳವಾರ, 13 ಡಿಸೆಂಬರ್ 2022 (16:06 IST)
ದುನಿಯ ವಿಜಿ ಪಾನಿಪುರಿ ಕಿಟ್ಟಿ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ   ಪ್ರತಿಕ್ರಿಯಿಸಿದ್ದು,ಅಂಬೇಡ್ಕರ್ ಭವನದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಕೇಸ್ ಕೌಂಟರ್ ಕೇಸ್ ಆಗಿರುತ್ತೆ.ಒಂದು ಕೇಸ್ ನಲ್ಲಿ ತನಿಖೆ ಮಾಡಿ ಚಾರ್ಜ್ ಶೀಟ್ ಮಾಡಲಾಗಿದೆ.ಮತ್ತೊಂದು ಕೇಸ್ ನ್ಯಾಯಾಲದ ಅನುಮತಿಯಂತೆ ಪಾನಿಪುರಿ ಕಿಟ್ಟಿ ಮೇಲೆ ಎಫ್ ಆರ್ ದಾಖಲು ಮಾಡಲಾಗಿದೆ.ಪ್ರಕರಣದಲ್ಲಿ ಪಾನಿಪುರಿ ಕಿಟ್ಟಿಗೆ ನೋಟಿಸ್ ಕೊಟ್ಟು ಕರೆಸಲಾಗಿದೆ ಪಾನಿಪುರಿ ಕಿಟ್ಟಿಯನ್ನ ಎಸಿಪಿ ಶೇಷಾದ್ರಿಪುರಂ ಅವರು ತನಿಖೆ ಮಾಡುತ್ತಿದ್ದಾರೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ