ದಾವಣಗೆರೆ ಜನತೆ ಬಳಿ ಕ್ಷಮೆ ಯಾಚಿಸಿದ ದುನಿಯಾ ವಿಜಯ್

ಮಂಗಳವಾರ, 7 ಅಕ್ಟೋಬರ್ 2014 (11:54 IST)
ದುನಿಯಾ ವಿಜಯ್ ಕ್ಷಮೆ ಯಾಚಿಸಿದ್ದಾರೆ ತಮ್ಮ ದಾವಣಗೆರೆ ಅಭಿಮಾನಿಗಳ ಪರವಾಗಿ! ಅದಕ್ಕೆ ಕಾರಣ ಇಷ್ಟೇ 2014ಅಕ್ಟೋಬರ್ 2  ರಂದು ದಾವಣಗೆರೆಯಲ್ಲಿ ಚಿತ್ರ ಬಿಡುಗಡೆಯ ಸಮಯದಲ್ಲಿ ಅವರ ಅಭಿಮಾನಿಗಳು ದಾವಣಗೆರೆ ಪುಷ್ಪಾಂಜಲಿ ಥಿಯೇಟರ್ ಬಳಿ ಕೋಳಿ ಕತ್ತರಿಸಿ ರಕ್ತದ ಓಕಳಿ ಎರಚಿದರು.
 
ಪುಷ್ಪಾಂಜಲಿ ಥಿಯೇಟರ್ ಬಳಿ ಒಂದು ಡಜನ್ ಕೋಳಿಗಳು ಅಭಿಮಾನಿಗಳಿ ಕತ್ತಿಗೆ ಆಹುತಿಯಾಯ್ತು. ಅವರು ತಮ್ಮ ಮೆಚ್ಚಿನ ನಾಯಕ ದುನಿಯಾ ವಿಜಯ್ ಹೊಸ ಚಿತ್ರ ಸಿಂಹಾದ್ರಿ ಬಿಡುಗಡೆಯ ಖುಷಿಯನ್ನು ಗಾಂಧಿ ಜಯಂತಿ ಸಮಯದಲ್ಲಿ ಕೋಳಿ ಕತ್ತರಿಸಿ ರಕ್ತ ಸುರಿಸುವುದರ ಮೂಲಕ ವ್ಯಕ್ತ ಪಡಿಸಿದರು.
 
ಗಾಂಧಿ ಜಯಂತಿ ದಿನದಂದು ಅಹಿಂಸಾ ದಿನ ಎಂದು ತನ್ನ ಅಭಿಮಾನಿಗಳಿಗೆ ಗೊತ್ತಿರಲಿಲ್ಲವಂತೆ! ಅವರ ಈ ಬಾನಗಡಿ ಮಾಡುವಾಗ ಪೊಲೀಸರು ಆ ಸ್ಥಳಕ್ಕೆ ಧಾವಿಸಿದಾಗ ಅವರು ಅಲ್ಲಿಂದ ಪರಾರಿಯಾದರು!ಈ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿರುವ ವಿಜಯ್.. ತಮ್ಮ ಪ್ರೀತಿಯನ್ನು ರಕ್ತಾಭಿಷೇಕದ ಮೂಲಕ ವ್ಯಕ್ತಪಡಿಸಿದ್ದು ಮತ್ತು ವ್ಯಕ್ತ ಪಡಿಸುವುದು ಸರಿಯಾದ ರೀತಿಯಲ್ಲ ಎಂದು ಹೇಳಿದ್ದಲ್ಲದೆ, ಆ ಬಗ್ಗೆ ದಾವಣಗೆರೆ ಜನತೆ ಬಳಿ ಕ್ಷಮೆ ಯಾಚಿಸಿದ್ದಾರೆ 
 
ಗಾಂಧಿ ಜಯಂತಿ ಸಮಯದಲ್ಲಿ ನಡೆದಂತಹ ಈ ಅಪಚಾರದ ಬಗ್ಗೆ! ಅಲ್ಲದೆ ತನ್ನ ಅಭಿಮಾನಿಗಳ ಬಳಿ ಈ ರೀತಿಯ ವರ್ತನೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ