ಮಾಸ್ತಿ ಗುಡಿ ಸಿನಿಮಾ ಪೋಸ್ಟರ್ ಹರಿದು ಹಾಕಿದ ದುಷ್ಕರ್ಮಿಗಳು

ಶನಿವಾರ, 13 ಮೇ 2017 (08:30 IST)
ಬೆಂಗಳೂರು: ದುನಿಯಾ ವಿಜಿ ಅಭಿನಯದ ಮಾಸ್ತಿ ಗುಡಿ ಚಿತ್ರ ನಿನ್ನೆ ರಾ್ಜ್ಯಾದ್ಯಂತ ಬಿಡುಗಡೆಯಾಗಿದೆ. ಆದರೆ ಇದು ಋಣಾತ್ಮಕ ಕಾರಣಕ್ಕೆ ಸುದ್ದಿಯಾಗುತ್ತಿರುವುದೇ ಹೆಚ್ಚು.

 
ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ಖಳನಟರಾದ ಅನಿಲ್ ಮತ್ತು ಉದಯ್ ದುರಂತ ಸಾವಿನಿಂದಾಗಿ ಸುದ್ದಿಯಾಗಿದ್ದ ಚಿತ್ರ, ಬಿಡುಗಡೆಗೂ ಮೊದಲೇ ಚಿತ್ರ ಮಂದಿರದ ಸಮಸ್ಯೆ ಸೇರಿದಂತೆ ಹಲವು ಅಡೆತಡೆಗಳನ್ನು ಎದುರಿಸಿತ್ತು.

ಇದೀಗ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ನಲ್ಲಿ ಚಿತ್ರ ಪೋಸ್ಟರ್ ನ್ನು ದುಷ್ಕರ್ಮಿಗಳು ಹರಿದು ಹಾಕಿದ ಕಾರಣಕ್ಕೆ ಸುದ್ದಿಯಾಗಿದೆ. ದುನಿಯಾ ವಿಜಿ ಜತೆ ಅನಿಲ್ ಮತ್ತು ಉದಯ್ ರ ಬೃಹತ್ ಕಟೌಟ್ ಹಾಕಲಾಗಿತ್ತು.

ಇದರಲ್ಲಿ ದುನಿಯಾ ವಿಜಿ ಮುಖದ ಭಾಗವನ್ನು ಮಾತ್ರ ಹರಿದು ಹಾಕಲಾಗಿದೆ. ಅನಿಲ್ ಮತ್ತು ಉದಯ್ ಚಿತ್ರಕ್ಕೆ ಯಾವುದೇ ಹಾನಿ ಮಾಡಲಾಗಿಲ್ಲ. ಹಾಗಾಗಿ ಯಾರೋ ಬೇಕೆಂದೇ ದುನಿಯಾ ವಿಜಿ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿರುವುದಂತೂ ಖಚಿತ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ