ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಸಾವನ್ನಪ್ಪಿದ ವರದಿಯಾಗಿದ್ದು, ಚಿತ್ರತಂಡದಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿದೆ. ಇದು ಯಾಕೆ ಹೀಗಾಗುತ್ತಿದೆ ಎಂಬ ಆತಂಕ ಶುರುವಾಗಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ಆರಂಭವಾದ ಬಳಿಕ ಒಂದೊಂದೇ ದುರ್ಘಟನೆ ನಡೆಯುತ್ತಲೇ ಇದೆ. ಶೂಟಿಂಗ್ ಗೆ ತೆರಳುತ್ತಿದ್ದ ಕಲಾವಿದರ ಬಸ್ ಅಪಘಾತದ ಬಳಿಕ ಇಬ್ಬರು ಕಲಾವಿದರು ಸಾವನ್ನಪ್ಪಿದ್ದರು. ಇದೀಗ ಮೂರನೆಯ ಕಲಾವಿದ ಸಾವನ್ನಪ್ಪಿದ ವರದಿಯಾಗಿದೆ.
ಇದೀಗ ಕೇರಳ ಮೂಲದ ಸಹ ಕಲಾವಿದ ವಿಜು ವಿಕೆ ಶೂಟಿಂಗ್ ಗೆಂದು ಬಂದಿದ್ದಾಗ ಹೋಟೆಲ್ ಕೊಠಡಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇದರೊಂದಿಗೆ ಕೆಲವೇ ದಿನಗಳ ಅಂತರದಲ್ಲಿ ಕಾಂತಾರ ಸಿನಿಮಾದ ಮೂರನೇ ಕಲಾವಿದ ಸಾವನ್ನಪ್ಪಿದ್ದಂತಾಗಿದೆ.
ಇದಕ್ಕೆ ಮೊದಲು ಶೂಟಿಂಗ್ ಮುಗಿಸಿ ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿದ್ದ ಜ್ಯೂನಿಯರ್ ಕಲಾವಿದ ಕಪಿಲ್ ಎಂಬಾತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಇದಾದ ಕೆಲವೇ ದಿನಕ್ಕೆ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ಮತ್ತೊಬ್ಬ ಕಲಾವಿದ ಹೃದಯಾಘಾತದಿಂದ ನಿಧನರಾಗಿರುವುದು ವಿಪರ್ಯಾಸ.