ಮತ್ತೊಮ್ಮೆ ಕನ್ನಡಿಗರಿಗೂ ಸಹಿತ ಅದೆ ಚಿತ್ರವನ್ನು ನೀಡುವ ಸಾಹಸ ಮಾಡುತ್ತಾರೆ. ಅಂತಹ ಸಿನಿಮಾಗಳಲ್ಲಿ ಸ್ಟಾರ್ ನಟರು ಅಭಿನಯಿಸಿದ್ದಾರೆ. ಕೆಲವು ಬಾರಿ ಆ ಚಿತ್ರಗಳು ಗೆದ್ದಿವೆ, ಒಂದಷ್ಟು ಸರ್ತಿ ಬಿದ್ದಿವೆ ಎಂದೇ ಹೇಳ ಬಹುದು. ಇತ್ತೀಚಿಗೆ ದೃಶ್ಯಂ, ಮಾಣಿಕ್ಯ, ನಮಸ್ತೇ ಮೇಡಂ ಚಿತ್ರಗಳು ರೀಮೇಕ್ ಆಗಿ ಹಣಕಾಸನ್ನು ಮಾಡಿಕೊಂಡಿತು.
ಆರಂಭದಲ್ಲಿ ಇದು ಸೂರಿ ಅವರ ಜನ್ಮದ ಕಥೆ ಎನ್ನುವುದನ್ನು ಹರಡಿಸಿದ್ದರು ಗಾಂಧಿನಗರಿಗರು. ಇದರಲ್ಲಿ ಸೂರಿಯದ್ದು ಎನ್ನಲು ಅವರ ಮದುವೆ ಲವ್ ಹಾಗು ಅರೆಂಜ್ ಗಳ ಸಮ್ಮಿಶ್ರಣ. ಆದರೆ ಇಲ್ಲಿ , ರೌಡಿಸಂ ಸಹ ಇರೋದ್ರಿಂದ ಇದು ಸೂರಿ ಬದುಕಿನ ಕಥೆ ಎಂದು ಹೇಳುವುದಕ್ಕೆ ಸಾಧ್ಯ ಇಲ್ಲ. ಇದು ಆಂಧ್ರ ಪ್ರದೇಶದ ಅದರಲ್ಲೂ ರಾಯಲ ಸೀಮೆಯನ್ನು ಆಳಿದ ಪೆರಿಟಾಲ ಸೂರಿ ಮತ್ತು ಪೆರಿಟಾಲ ರವಿ ರೌಡಿಗಳ ಬದುಕಿನ ಕಥಾ ಹಂದರ ಹೊಂದಿರುವ ದ್ವೇಷ ಹಾಗು ಪ್ರೀತಿಯ ಕಥೆ ಹೊಂದಿರುವ ಚಿತ್ರವಾಗಿದೆ.
ಈ ಚಿತ್ರದಲ್ಲಿ ಸೂರಿ ಅವರ ರೋಚಕ ಪ್ರಣಯ ಕಥೆಗಳತ್ತ ಗಮನ ನೀಡಲಾಗಿದ್ದು, ಅದನ್ನು ಈ ಚಿತ್ರದಲ್ಲಿ ಹೈಲೈಟ್ ಮಾಡಲಾಗಿದೆಯಂತೆ. ಆದರೆ ಈ ಚಿತ್ರದ ನೈಜ ಕಥೆಯನ್ನು ಹೊಂದಿದ್ದರು ಸಹಿತ, ಅದು ಯಾರ ಜೀವನ ಕಥೆ ಎನ್ನುವುದನ್ನು ಸಧ್ಯಕ್ಕೆ ತಿಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ನಿರ್ಮಾಪಕ ಸುರೇಶ. ಆದರೆ ಈ ಸಂಗತಿಯನ್ನು ಸಿನಿಮಾ ಬಿಡುಗಡೆಯ ಸಮಯದಲ್ಲಿ ಬಹಿರಂಗಗೊಳಿಸುತ್ತಾರೆ ಎನ್ನುವ ಸಂಗತಿ ಖುದ್ದು ನಿರ್ಮಾಪಕರು ಹೇಳಿದ್ದಾರೆ.