ಕೊಪ್ಪಳದ ಗಲ್ಲಿಯಲ್ಲಿ ದನಕಾಯುತ್ತಿರುವ ದುನಿಯಾ ವಿಜಿ

ಶುಕ್ರವಾರ, 7 ಆಗಸ್ಟ್ 2015 (10:04 IST)
ಯೋಗರಾಜ್ ಭಟ್ ನಿರ್ದೇಶನದಲ್ಲಿ ದುನಿಯಾ ವಿಜಿ ನಾಯಕ ನಟನಿ ಕಾಣಿಸಿಕೊಳ್ಳುತ್ತಿರುವ ದನಕಾಯೋನು ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಅದಕ್ಕಾಗಿ ಸಿನಿಮಾ ತಂಡ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬೀಡು ಬಿಟ್ಟಿದೆ, ಇನ್ನು ಡೈರೆಕ್ಟರ್ ಯೋಗರಾಜ್ ಭಟ್ ಅಂತೂ ಪಂಚೆ ಉಟ್ಟುಕೊಂಡು ಬಿಜಿ ಹಾಗೂ  ಪ್ರಿಯಾಮಣಿಯವರಿಗೆ ಭರ್ಜರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರಂತೆ.
ಗಂಗಾವತಿಯ ಗಲ್ಲಿಗಳಲ್ಲಿ ಸಿನಾಮ ಚಿತ್ರೀಕರಣ ನಡೆಯುತ್ತಿದ್ದು,  ಸುಡು ಬಿಸಿಲಿನಲ್ಲೇ ಪ್ರಿಯಾಮಣಿ ಹಾಗೂ ಬ್ಲ್ಯಾಕ್ ಕ್ರೋಬಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ,  ಇನ್ನು ದುನಿಯಾ ಸಿನಿಮಾದಲ್ಲಿ ದುನಿಯಾ ವಿಜಿ ಹಾಗೂ ರಂಗಾಯಣ ರಘು ನಡುವಿನ ಕೆಮಿಸ್ಟ್ರಿ ಸಕತ್ತಾಗಿ ವರ್ಕ್ ಔಟ್ ಆಗಿತ್ತು. ಇದೀಗ ಮತ್ತೆ ಇವರಿಬ್ಬರು ಈ ಸಿನಾಮದಲ್ಲೂ ಜೊತೆಯಾಗಿ ಕಾಣಿಸಿಕೊಳ್ಲುತ್ತಿದ್ದಾರೆ.
 
ಇನ್ನು ಸಿನಾಮದಲ್ಲಿ ಪ್ರಿಯಾ ಅವರದ್ದು, ಡೈನಾಮಿಕ್ ಕ್ಯಾರೆಕ್ಟರ್ ಅಂತೆ. ತಮ್ಮ ಡೈಲಾಗ್ಸ್ ಗಳ ಮೂಲಕ ಪ್ರಿಯಾ ದುನಿಯಾ ವಿಜಿಗೆ ಚೆನ್ನಾಗಿಯೇ ಪಂಚ್ ಕೊಡುತ್ತಾರಂತೆ. ಒಟ್ಟಿನಲ್ಲಿ ದಿನದಿದಂ ದಿನಕ್ಕೆ ದನಕಾಯೋನ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆಗಳು ಹೆಚ್ಚಾಗುತ್ತಿವೆ.

ವೆಬ್ದುನಿಯಾವನ್ನು ಓದಿ