ನಿರ್ದೇಶಕ ಈರೋಡ್ ಸೌಂಡರ್ ನಿಧನ

ಸೋಮವಾರ, 7 ಡಿಸೆಂಬರ್ 2020 (12:50 IST)
ಚೆನ್ನೈ :  ಶರತ್ ಕುಮಾರ್ ಅವರೊಂದಿಗೆ ‘ಸಿಂಹ ರಾಶಿ’ ಚಿತ್ರವನ್ನು ನಿರ್ದೇಶಿಸಿದ ಈರೋಡ್ ಸೌಂಡರ್ ಮೂತ್ರ ಪಿಂಡದ ಕಾಯಿಲೆಯಿಂದ  ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ನಿರ್ದೇಶಕ ಈರೋಡ್ ಸೌಂಡರ್ ಖಾಸಗಿ ಆಸ್ಪತ್ರೆಯಲ್ಲಿ ಮೂತ್ರಪಿಂಡದ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯು ಭಾನುವಾರ ನಡೆದಿದೆ.

ಇವರು 15ಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಕಥೆಗಳನ್ನು ಬರೆದಿದ್ದಾರೆ. ಮತ್ತು ತಮಿಳು ನಾಡು ಸರ್ಕಾರದಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಚರಣ್ ಪಾಂಡಿಯನ್, ನಟ್ಟಮೈ, ಪರಂಪಾರೈ ಮತ್ತು ಸಮುದ್ರರಾಮ್ ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ