ಇಂತಹ ಪಾತ್ರದಲ್ಲಿ ಹರಿಪ್ರಿಯ ನಟಿಸಿಲ್ಲವಂತೆ .. ಇದು ಆಕೆಗೆ ಹೊಸ ಅನುಭವವಂತೆ!

ಸೋಮವಾರ, 24 ನವೆಂಬರ್ 2014 (12:15 IST)
ವಿಜಯ ರಾಘವೇಂದ್ರ,ಹರಿಪ್ರಿಯ ಜೊತೆಯಾಗಿ ನಟಿಸುತ್ತಿರುವ ಚಿತ್ರ ರಣತಂತ್ರ. ಉಗ್ರಂ ಚಿತ್ರದಲ್ಲಿ ಶ್ರೀ ಮುರಳಿ ಅವರ ಜೊತೆ ಅಭಿನಯಿಸಿ ಯಶಸ್ವಿ ನಾಯಕಿ ಎಂದು ಅನ್ನಿಸ್ಕೊಂಡಿರುವ ಹರಿಪ್ರಿಯಗೆ ಈಗ ಭಾರಿ ಚಾನ್ಸ್ ಗಳು. 
 
ಆಕೆ ಮತ್ತು ವಿಜಯ್ ರಾಘವೇಂದ್ರ ಅವರ ನಟನೆಯ ಚಿತ್ರವನ್ನು ಆರ್.ಮನೋಜ್ ಕುಮಾರ್ ಯಾದವ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್. ರಮೇಶ್ ನಿರ್ಮಾಣ ಮಾಡಿದ್ದಾರೆ.  ರಣತಂತ್ರ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಮುಗಿದಿದ್ದು,  ಡಿಟಿಎಸ್ ಕಾರ್ಯ ಭರದಿಂದ  ಸಾಗುತ್ತಿದೆ.
 
ಬೆಂಗಳೂರು,ಮೈಸೂರು,ಗೋವಾ ಮುಂತಾದೆಡೆಗಳಲ್ಲಿ ಚಿತ್ರೀಕರಣ ಸಾಗಿದೆ.ಈ ವರೆಗೂ ಇಂತಹ ಒಂದು ಪಾತ್ರದಲ್ಲಿ ತಾವು ನಟಿಸಿಲ್ಲ ಎಂದು ಹರಿಪ್ರಿಯ ಮತ್ತು ವಿಜಯ್ ರಾಘವೇಂದ್ರ ಹೇಳಿದ್ದಾರೆ.ಆದಿರಾಂ ರಣತಂತ್ರದ  ಕಥೆ,ಚಿತ್ರಕಥೆ,ಸಂಭಾಷಣೆ ನಿರ್ದೇಶನ ಹೊಣೆ ಹೊತ್ತಿದ್ದಾರೆ. ರಾಜೇಶ್ ಯಾದವ್ ಛಾಯಾಗ್ರಹಣ ,ಎಂ.ಕಾರ್ತಿಕ್ ಸಂಗೀತ,ಉಗ್ರಂಶೆಟ್ಟಿ ಸಂಕಲನ ಮಾತ್ರವಲ್ಲದೆ ಸಾಹಸ-ಮಾಸ್ ಮಾದ,ನೃತ್ಯ-ಕಲೈ-ರಾಧಿಕಾ,ಸಾಹಿತ್ಯ-ನಾಗೇಂದ್ರ 
ಪ್ರಸಾದ್-ಕೆ.ಕಲ್ಯಾಣ್-ಕವಿರಾಜ್,ಕೋ-ಡೈರೆಕ್ಟರ್-ಭವಾನಿಶಂಕರ್,ನಿರ್ವಹಣೆ - ಹಾರ್ಟ್ ಬೀಟ್ ರಾಜು- ಮುರುಗದಾಸ್ ಚಿತ್ರದ ಮುಖ್ಯ ಪಾತ್ರಧಾರಿಗಳಾಗಿದ್ದಾರೆ ತೆರೆಯ ಹಿಂದೆ. ಅತ್ಯಂತ ಆಸಕ್ತಿಕರ ಹಾಟ್ ಥ್ರಿಲ್ಲರ್ ಕಥಾ ಹೂರಣ ಹೊಂದಿರುವ ಚಿತ್ರ ಇದಾಗಿದೆ. ರಣತಂತ್ರ ದಲ್ಲಿ ಪಾಲುದಾರರಾಗಿದ್ದಾರೆ  ಚಿನ್ನಾರಿ ಮುತ್ತ ವಿಜಯ್,ಹರಿಪ್ರಿಯ,ಸತ್ಯಜಿತ್,ಭಜರಂಗಿ ಮಾದು,ಸಪ್ನೊಂಕಾ ರಾಣಿ ಐಶ್ವರ್ಯ,ಕುರಿ ರಂಗ, ಮುಂತಾದವರು. 
 

ವೆಬ್ದುನಿಯಾವನ್ನು ಓದಿ