ತೇಜಸ್ವಿನಿಯ 'ಸತ್ಯ'ನ ಮೊದಲ ಶೆಡ್ಯೂಲ್ ಸಂಪೂರ್ಣ

ಬುಧವಾರ, 8 ಜುಲೈ 2015 (10:25 IST)
ಕನ್ನಡದ ಅಲ್ಪಮಟ್ಟಿನ ವಿವಾದಿತ ನಟಿ ತೇಜಸ್ವಿನಿ. ಯಾಕೆ ಈ ಮಾತು ಹೇಳಿದ್ದೇವೆ ಅಂದ್ರೆ ಆಕೆ ಇರುವ ಕಡೆ ವಿವಾದ ಸ್ವಲ್ಪ ಮಟ್ಟಿಗೆ ಥಳುಕು ಹಾಕಿಕೊಳ್ಳುತ್ತದೆ. ಅದಾದ ಬಳಿಕ ಆಕೆ ಬಂದು ಅದು ಹಂಗಲ್ಲ ಹಿಂಗೆ ಎನ್ನುವ ಕ್ಲಾರಿಫಿಕೇಶನ್ ಕೊಟ್ಟು ಮಾಧ್ಯಮದವರನ್ನು ಸುಮ್ಮನಾಗಿಸುತ್ತಾರೆ. ಅವೆಲ್ಲಾ ಈಗ ಬೇಡ ಬಿಡಿ. ಪ್ರಸ್ತುತ ಈ ಗೂಳಿಹಟ್ಟಿ ನಟಿಯ ನಟನೆಯ ಮತ್ತೊಂದು ಕನ್ನಡ ಚಿತ್ರ ನಿತ್ಯ ಜೊತೆ ಸತ್ಯ. 
ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆ ಎರಡರಲ್ಲೂ ಸಿದ್ಧವಾಗುತ್ತಿದೆ. ಭಾಗ್ಯಲಕ್ಷ್ಮಿ ಕ್ರಿಯೇಷನ್ಸ್ ಲಾಂಛನದಲ್ಲಿ ಮಲ್ಲಿಕಾರ್ಜುನ ರೆಡ್ಡಿ ಅವರು ನಿರ್ಮಿಸುತ್ತಿರುವ ನಿತ್ಯ ಜೊತೆ ಸತ್ಯ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರಕ್ಕೆ ಹದಿನೈದು ದಿನಗಳ ಚಿತ್ರೀಕರಣ ನಡೆದಿದೆ. 
 
ಮನೀಶ್ ಬಾಬು, ತೇಜಸ್ವಿನಿ, ದೇವರಾಜ್, ದಿನೇಶ್, ನಿವಾಸ್, ಆಶಾ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುವ ಹೊಣೆಯನ್ನು ಹೊತ್ತಿದ್ದಾರೆ ನಾಗೇಂದ್ರಪ್ರಸಾದ್. ಕಲ್ಯಾಣ್ ಸಾಮಿ ಅವರ ಛಾಯಾಗ್ರಹಣ ಹಾಗೂ ರಘುರಾಂ ಸಂಗೀತ ನಿರ್ದೇಶನವನ್ನು ಈ ಚಿತ್ರ ಹೊಂದಿದೆ. 

ವೆಬ್ದುನಿಯಾವನ್ನು ಓದಿ