ಗಣೇಶ್ ನನ್ನ ಕಿರಿಯ ಸಹೋದರನಂತೆ.. ನಾನು ಆತನ ಟಿವಿ ಕಾರ್ಯಕ್ರಮಗಳನ್ನು ಸಹಿತ ನೋಡುತ್ತಿದ್ದೆ

ಸೋಮವಾರ, 17 ನವೆಂಬರ್ 2014 (09:58 IST)
ಗೋಲ್ಡನ್ ಸ್ಟಾರ್ ಗಣೇಶ್ ನನ್ನ ಕಿರಿಯ ತಮ್ಮನಂತೆ ಎಂದು ಹೇಳಿದ್ದಾರೆ ಡಾ. ಶಿವರಾಜ್ ಕುಮಾರ್. ಅವರು ಇತ್ತೀಚಿಗೆ ಮಾಧ್ಯಮಗಳ ಮುಂದೆ ಮಾತನಾಡುತ್ತಾ 2007ರಲ್ಲಿ ಪ್ರಕಟಗೊಂಡ  ಮುಂಗಾರು ಮಳೆ ಯಶಸ್ಸಿನ ವರದಿಯಲ್ಲಿ ಬರೆದ ಕೆಲವು ಸಂಗತಿಗಳು  ಓದಿ  ತಾವು  ಬೇಸರ ಹೊಂದಿದ್ದೆವು ಎಂದು ಹೇಳುತ್ತಾ ಎಲ್ಲರ ಮುಂದೆ  ಗಣೇಶ್ ನನ್ನ ಕಿರಿಯ ತಮ್ಮನಂತೆ ಎಂದು ಹೇಳಿದ್ದಾರೆ.

ಖುಷಿ ಖುಷಿಯಲಿ ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚಿಗೆ ನಡೆಯಿತು. ಆ ಸಮಯದಲ್ಲಿ ಮಾತನಾಡುತ್ತ ಶಿವಣ್ಣ   ಈ ಭಾವ ವ್ಯಕ್ತಪಡಿಸಿದರು. ಈ ಚಿತ್ರದಲ್ಲಿ ಗಣೇಶ್ ಜೊತೆ ಅಮೂಲ್ಯ, ನಂದಿನಿ ರೈ ನಟಿಸಿದ್ದಾರೆ. ಚಿತ್ರವನ್ನು ಯೋಗಿ ಜಿ ರಾಜ್ ಅವರು ನಿರ್ದೇಶನ ಮಾಡಿದ್ದಾರೆ. 
 
ಈ ಸಮಯದಲ್ಲಿ ಮಾತನಾಡಿದ ಶಿವಣ್ಣ   ತಾವು ಗಣೇಶ್ ಅವರ ಟಿವಿ ಕಾರ್ಯಕ್ರಮ ವೀಕ್ಷಿಸುತ್ತಾ ಇದ್ದುದನ್ನು ನೆನಪಿಸಿ ಕೊಂಡರು, ಅಲ್ಲದೆ ಚಿತ್ರದ ಛಾಯಾಗ್ರಾಹಕ ಶ್ರೀಶ ಅವರನ್ನು ಸಹಿತ ಈ ಸಮಯದಲ್ಲಿ ಅಭಿನಂದಿಸಿದರು. ಮುಂಗಾರು  ಮಳೆ ಸಿನಿಮಾ ಬಿಡುಗಡೆಯ ಸಮಯದಲ್ಲಿ  ಡಾ.ರಾಜ್ ಕುಮಾರ್ ಕುಟುಂಬದ ಸದಸ್ಯರು ಗಣೇಶ್ ಅವರನ್ನು ಮಟ್ಟ ಹಾಕಲು ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಸುದ್ದಿಯು ಹರಡಿತ್ತು.ಇದು ಚಂದನವನದಲ್ಲಿ ಮಾತ್ರವಲ್ಲ ಇಡೀ ಪ್ರೇಕ್ಷಕವರ್ಗದವರಲ್ಲೂ ಸಹಿತ  ಆಶ್ಚರ್ಯ ಹಾಗೂ ಆಘಾತ ಉಂಟು ಮಾಡಿತ್ತು. 

ವೆಬ್ದುನಿಯಾವನ್ನು ಓದಿ