ಖುಷಿ ಖುಷಿಯಲಿ ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚಿಗೆ ನಡೆಯಿತು. ಆ ಸಮಯದಲ್ಲಿ ಮಾತನಾಡುತ್ತ ಶಿವಣ್ಣ ಈ ಭಾವ ವ್ಯಕ್ತಪಡಿಸಿದರು. ಈ ಚಿತ್ರದಲ್ಲಿ ಗಣೇಶ್ ಜೊತೆ ಅಮೂಲ್ಯ, ನಂದಿನಿ ರೈ ನಟಿಸಿದ್ದಾರೆ. ಚಿತ್ರವನ್ನು ಯೋಗಿ ಜಿ ರಾಜ್ ಅವರು ನಿರ್ದೇಶನ ಮಾಡಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ಶಿವಣ್ಣ ತಾವು ಗಣೇಶ್ ಅವರ ಟಿವಿ ಕಾರ್ಯಕ್ರಮ ವೀಕ್ಷಿಸುತ್ತಾ ಇದ್ದುದನ್ನು ನೆನಪಿಸಿ ಕೊಂಡರು, ಅಲ್ಲದೆ ಚಿತ್ರದ ಛಾಯಾಗ್ರಾಹಕ ಶ್ರೀಶ ಅವರನ್ನು ಸಹಿತ ಈ ಸಮಯದಲ್ಲಿ ಅಭಿನಂದಿಸಿದರು. ಮುಂಗಾರು ಮಳೆ ಸಿನಿಮಾ ಬಿಡುಗಡೆಯ ಸಮಯದಲ್ಲಿ ಡಾ.ರಾಜ್ ಕುಮಾರ್ ಕುಟುಂಬದ ಸದಸ್ಯರು ಗಣೇಶ್ ಅವರನ್ನು ಮಟ್ಟ ಹಾಕಲು ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಸುದ್ದಿಯು ಹರಡಿತ್ತು.ಇದು ಚಂದನವನದಲ್ಲಿ ಮಾತ್ರವಲ್ಲ ಇಡೀ ಪ್ರೇಕ್ಷಕವರ್ಗದವರಲ್ಲೂ ಸಹಿತ ಆಶ್ಚರ್ಯ ಹಾಗೂ ಆಘಾತ ಉಂಟು ಮಾಡಿತ್ತು.