ಜೆಕೆ ಖ್ಯಾತಿಯ ಕಾರ್ತಿಕ್ ಭಾರತ ಬಿಟ್ಟು ಹೋಗ್ತಾ ಇದ್ದಾರಾ ?

ಶನಿವಾರ, 18 ಜುಲೈ 2015 (10:42 IST)
ಕನ್ನಡ ಕಿರಿತೆರೆಯ ಪ್ರಪಂಚದಲ್ಲಿ ಅಶ್ವಿನಿ ನಕ್ಷತ್ರ ಧಾರವಾಹಿ ಅತ್ಯಂತ ಜನಪ್ರಿಯತೆ ಪಡೆದಿತ್ತು. ಆ ಧಾರಾವಾಹಿಯ ಮುಖ್ಯ ಪಾತ್ರಧಾರಿ ಜೆ ಕಾರ್ತಿಕ್. ಅವರು ಸಿನಿಮಾದಲ್ಲೂ ಸಹಿತ ನಟಿಸುತ್ತಿದ್ದ ಕಾರಣ ಅಲ್ಲಿ ಇಲ್ಲಿ ಎರಡು ಕಡೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಥ್ರಿಲ್ಲರ್  ಎಂಟರ್ ಟೈನರ್ ಅಂಶಗಳನ್ನು ಒಳಗೊಂಡ ಹೊಸ ಚಿತ್ರ ಕಾಂಚನ. ಇವೆಲ್ಲ ಅವರ ಬಣ್ಣದ ಬದುಕಿನ ಕಥೆ. ಇತ್ತೀಚೆಗೆ ಅವರು ತಮ್ಮ ಸೋಶಿಯಲ್ ನೆಟ್ ವರ್ಕ್ ನಲ್ಲಿ ಜೀವನ ರಹಿತ ಎಂದು ಬರೆದು ಕೊಂಡಿದ್ದರು. ಆದರೆ ಅದಾಗಿ ಸ್ವಲ್ಪ ದಿನಗಳ ನಂತರ ಮತ್ತೆ ಅದಕ್ಕೆ ಪೂರಕವಾದ ಮಾತು ಬರೆದಿದ್ದಾರೆ. ನಾನು ಈ ದೇಶ ಬಿಟ್ಟು ಬಿಟ್ಟು ಬಿಡುತ್ತಿದ್ದೇನೆ.ನನಗೆ ವಿದೇಶದಲ್ಲಿ ಕೆಲಸ ಸಿಕ್ಕಿದೆ. ಇವೆಲ್ಲವನ್ನು  ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ ಎನ್ನುವುದು ನಿಮಗೆ ಮನದಟ್ಟು ಮಾಡುತ್ತಿದ್ದೇವೆ ಡಿಯರ್  ರೀಡರ್ಸ್.
ಇದನ್ನು ಓದಿದ ಅವರ ಅಭಿಮಾನಿಗಳು ಕಾರ್ತಿಕ್ ನಿಜಕ್ಕೂ ಈ ದೇಶ ಬಿಟ್ಟು ಬಿಡ್ತಾರ ಎಂದು ಚಿಂತಿತರಾಗಿದ್ದಾರೆ.ಆದರೆ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎನ್ನುವುದು ಗೊತ್ತಿಲ್ಲ. ಅವರು ಇಲ್ಲಿ ಬಿಟ್ಟು ಅಲ್ಲಿಗೆ ಹೋದರು ಸಹ ಬಣ್ಣದ ಸೆಳೆತದಿಂದ ಮತ್ತೆ ಇಲ್ಲಿಗೆ ಬರುವ ಸಾಧ್ಯತೆ ಹೆಚ್ಚು. ಬಣ್ಣದ ಗುಂಗು ಅಂತಹದ್ದು. ನಿಜಕ್ಕೂ ನಟ ವಿದೇಶಕ್ಕೆ ಹೋದರೆ ಕನ್ನಡ ಚಿತ್ರರಂಗ ಅಲ್ಪ ಕಾಲ ಜೆಕೆಯಂತಹ  ಪ್ರತಿಭಾವಂತನನ್ನು ದೂರ ಮಾಡಿಕೊಳ್ಳುವುದು ಸತ್ಯ. 

ವೆಬ್ದುನಿಯಾವನ್ನು ಓದಿ