ಬಾಲಿವುಡ್ ಸ್ಟಾರ್ ಗಳಿಗೆ ತಲೆನೋವಾದ ಮತ್ತೊಂದು ದಕ್ಷಿಣದ ಸಿನಿಮಾ

ಬುಧವಾರ, 17 ಆಗಸ್ಟ್ 2022 (08:00 IST)
ಮುಂಬೈ: ಇತ್ತೀಚೆಗೆ ಬಾಲಿವುಡ್ ನಟರಿಗೆ ಬಹಿಷ್ಕಾರದ ಭೀತಿ ಒಂದೆಡೆಯಾದರೆ, ದಕ್ಷಿಣ ಭಾರತದ ಸಿನಿಮಾಗಳ ಕಾಟ ಇನ್ನೊಂದೆಡೆ.

ಹಿಂದೆ ನೀಡಿದ್ದ ಹಿಂದೂ ವಿರೋಧಿ, ದೇಶ ವಿರೋಧಿ ಹೇಳಿಕೆಗಳು ಬಾಲಿವುಡ್ ಸ್ಟಾರ್ ಗಳಿಗೆ ಈಗ ಮುಳುವಾಗುತ್ತಿದೆ. ಅಂತಹ ನಟರ ಚಿತ್ರಗಳು ಬಿಡುಗಡೆಗೂ ಮುನ್ನವೇ ಬಹಿಷ್ಕಾರದ ಭೀತಿ ಎದುರಿಸುತ್ತಿವೆ. ಇದರಿಂದಾಗಿ ಈಗಾಗಲೇ ಅಮೀರ್ ಖಾನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಸೇರಿದಂತೆ ಎಲ್ಲರೂ ಬೆನ್ನು ಬೆನ್ನಿಗೆ ಸೋಲು ಕಂಡಿದ್ದಾರೆ.

ಇದರ ನಡುವೆ ಬಾಲಿವುಡ್ ಸ್ಟಾರ್ ಗಳಿಗೆ ಈಗ ತೆಲುಗು ಮೂಲದ ಕಾರ್ತಿಕೇಯ 2 ಸಿನಿಮಾ ತಲೆನೋವಾಗಿದೆ. ಒಂದೆಡೆ ಲಾಲ್ ಸಿಂಗ್ ಛಡ್ಡಾ, ರಕ್ಷಾ ಬಂಧನ್ ಮಕಾಡೆ ಮಲಗಿದ್ದರೆ, ತೆಲುಗು ಮೂಲದ ಕಾರ್ತಿಕೇಯ 2 ಸಿನಿಮಾ ಹಿಂದಿಯಲ್ಲೂ ಜನರನ್ನು ಸೆಳೆಯುತ್ತಿದೆ. ಹಿಂದೂ ದೇವರಿಗೆ ಸಂಬಂಧಿಸಿದ ಕತೆಯಿರುವ ಕಾರಣಕ್ಕೆ ಜನ ಥಿಯೇಟರ್ ಗೆ ತಾವಾಗಿಯೇ ಬಂದು ಸಿನಿಮಾ ನೋಡುತ್ತಿದ್ದಾರೆ. ಇದರಿಂದಾಗಿ ಹಿಂದಿಯಲ್ಲೂ ಶೋ ಹೆಚ್ಚು ಮಾಡಲಾಗುತ್ತಿದೆ. ಹೀಗಾಗಿ ಇದು ಮತ್ತೊಂದು ಕಾಶ್ಮೀರ್ ಫೈಲ್ಸ್ ಸಿನಿಮಾವಾಗುವುದರಲ್ಲಿ ಅನುಮಾನವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ