ಬಹಿಷ್ಕಾರ ಮಾಡಿದ್ರೆ ಮಾಡ್ಕೊಳ್ಳಿ ಎಂದಿದ್ದ ಕರೀನಾ ಈಗ ವರಸನೇ ಬದಲಾಯಿಸಿದ್ರು!

ಮಂಗಳವಾರ, 16 ಆಗಸ್ಟ್ 2022 (16:04 IST)
ಮುಂಬೈ: ಲಾಲ್ ಸಿಂಗ್ ಛಡ್ಡಾ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ ನಟಿ ಕರೀನಾ ಕಪೂರ್ ಈಗ ತಮ್ಮ ಹೇಳಿಕೆಯನ್ನೇ ಬದಲಾಯಿಸಿದ್ದಾರೆ.

ಲಾಲ್ ಸಿಂಗ್ ಛಡ್ಡಾ ಬಿಡುಗಡೆಗೂ ಮೊದಲೇ ಬಹಿಷ್ಕಾರದ ಭೀತಿ ಎದುರಿಸಿತ್ತು. ಆಗ ಹೇಳಿಕೆ ನೀಡಿದ್ದ ಕರೀನಾ ಬಹಿಷ್ಕಾರ ಮಾಡುವವರು ಮಾಡಿಕೊಳ‍್ಳಲಿ, ಇದಕ್ಕೆಲ್ಲಾ ಕ್ಯಾರೇ ಮಾಡಬಾರದು ಎಂದಿದ್ದರು.

ಆದರೆ ಈ ಬಹಿಷ್ಕಾರದ ಅಭಿಯಾನ ಚಿತ್ರದ ಸೋಲಿಗೆ ಕಾರಣವಾಗುತ್ತಿದ್ದಂತೇ ಹೇಳಿಕೆ ಬದಲಾಯಿಸಿದ್ದಾರೆ. ‘ದಯವಿಟ್ಟು ಬಹಿಷ್ಕಾರ ಮಾಡಬೇಡಿ. ಥಿಯೇಟರ್ ಗೆ ಬಂದು ಸಿನಿಮಾ ನೋಡಿ’ ಎಂದು ನಾಯಕಿ ನಟಿ ಕರೀನಾ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ