ಭಾರ್ಗವ್ ಅವರ ನಿರ್ಮಾಣದ ಹೊಸ ಚಿತ್ರ ಒಡ್ಡೋಲಗ ಆಗಸ್ಟ್ ತಿಂಗಳಲ್ಲಿ ಲಾಂಚ್ ಆಗಲಿದೆಯಂತೆ. ಅದಕ್ಕೂ ಮುನ್ನ ಗೂಳಿಹಟ್ಟಿ ನಿರ್ದೇಶಕ ಶಶಾಂಕ್ ರಾಜ್ ಅವರು ಗೂಳಿಹಟ್ಟಿಗೆ ಇನ್ನು ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಿ ಸೇರ್ಪಡೆ ಮಾಡುತ್ತಾರಂತೆ. ಅದು ಇನ್ನು ಮುವ್ವತ್ತು ಥಿಯೇಟರ್ ಗಳಲ್ಲಿ ಬಿಡುಗಡೆ ಆಗುತ್ತದೆ ಎನ್ನುವ ಸುದ್ದಿ ಹೊರ ಬಂದಿದೆ. ಒಟ್ಟಾರೆ ಕನ್ನಡ ಚಿತ್ರದ ಯಶಸ್ಸು ಅತ್ಯಂತ ಸಂತಸ ನೀಡುವಂತಹದ್ದು. ಅದರಲ್ಲೂ ಹೊಸ ಕಲಾವಿದರು, ಹೆಚ್ಚು ಜನಪ್ರಿಯತೆ ಪಡೆಯದ ಕಲಾವಿದರು ಇರುವ ಸಿನಿಮಾಗಳು ಈ ರೀತಿ ಬೆಳವಣಿಗೆ ಹೊಂದಿದ್ದರೆ ಅದು ಸ್ವಾಗತಾರ್ಹ. ಗೂಳಿಹಟ್ಟಿಯಲ್ಲಿ ಪವನ್ ನಾಯಕರಾಗಿದ್ದಾರೆ, ತೇಜಸ್ವಿನಿ ನಾಯಕಿಯಾಗಿದ್ದಾರೆ. ಇದರಲ್ಲಿ ಅಪ್ಪು ವೆಂಕಟೇಶ್ ಸಹ ಮುಖ್ಯಪಾತ್ರಧಾರಿಯಾಗಿದ್ದಾರೆ.