'ಪಾಪನಾಸನಂ' ಮೂಲಕ ಮತ್ತೇ ಬಣ್ಣ ಹಚ್ಚಿದ ಗೌತಮಿ

ಶುಕ್ರವಾರ, 3 ಜುಲೈ 2015 (10:55 IST)
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅದರಲ್ಲೂ,ಎಂಬತ್ತರ ದಶಕದಲ್ಲಿ ಅತಿ ಹೆಚ್ಚಿನ ಗಮನ ಸೆಳೆದ ನಟಿ ಗೌತಮಿ.ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಉತ್ತಮ ಸ್ಥಾನ ಪಡೆದ ಗೌತಮಿ ಡಾ. ಅಂಬರೀಶ್ ಅವರ ಜೊತೆ ಏಳು ಸುತ್ತಿನ ಕೋಟೆಯಂತಹ ವಿಭಿನ್ನ ಚಿತ್ರಗಳಲ್ಲಿ ನಟಿಸಿ ಎಲ್ಲರ ಮನ ಗೆದ್ದಿದ್ದರು. ಆಕೆ ಈಗ ಕನ್ನಡದಲ್ಲಿ ಸೂಪರ್ ಹಿಟ್ ಆದ ಮಲೆಯಾಳಂ ಮೂಲದ ಚಿತ್ರ ದೃಶ್ಯಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪಾಪನಾಸನಂ ಎನ್ನುವ ಹೆಸರಲ್ಲಿ ಈ ಚಿತ್ರ ಈಗ ತಮಿಳಿನಲ್ಲಿ ನಿರ್ಮಾಣವಾಗುತ್ತಿದೆ. 
ಜೀತೂ ನಿರ್ದೇಶನದಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ಕಮಲ್ ಹಾಸನ್ ಅವರು ಮುಖ್ಯ ಪಾತ್ರಧಾರಿಯಾಗಿದ್ದಾರೆ. ಈ ಚಿತ್ರ ಇಂದು ದೇಶಾದ್ಯಂತ ಬಿಡುಗಡೆ  ಆಗಿದೆ.ಕಮಲ್ ಹಾಸನ್ ಅವರ ಜೊತೆ ಸಹ ಜೀವನ ನಡೆಸುತ್ತಿರುವ ಗೌತಮಿ ಅನೇಕ ವರ್ಷಗಳ ಬಳಿಕ ಪಾಪನಾಸನಂ ಮೂಲಕ ಪುನಃ ಬಣ್ಣ ಹಚ್ಚಿದ್ದಾರೆ. ಆದರೆ ಇಷ್ಟು ವರ್ಷಗಳ ಗ್ಯಾಪ್ ಇದ್ದರೂ ಸಹಿತ ಗೌತಮಿ ನಟನೆಯಲ್ಲಿ ಯಾವುದೇ ರೀತಿಯ ಕೊರತೆ ಇರಲಿಲ್ಲ ಎನ್ನುವ ಮಾತನ್ನು ಯೂನಿಟ್ ನವರು ಹೇಳಿದ್ದಾರೆ. ಪಾಪನಾಸನಂ ಬಾಕ್ಸಾಫಿಸಲ್ಲಿ ಯಾವ ರೀತಿ ಗಳಿಕೆ ಮಾಡುತ್ತದೆ ಎನ್ನುವುದು ಇಂದು ನಿರ್ಧಾರವಾಗುತ್ತದೆ. ಚಿತ್ರತಂಡಕ್ಕೆ ನಮ್ಮ ಕಡೆಯಿಂದ ಆಲ್ ದ ಬೆಸ್ಟು!
 

ವೆಬ್ದುನಿಯಾವನ್ನು ಓದಿ