ಅಂದ್ಹಾಗೆ ಹರೀಶ್ ರಾಜ್ ನಿರ್ದೇಶಿಸಿ ನಿರ್ಮಿಸುತ್ತರುವ ಸಿನಿಮಾ ಶ್ರೀ ಸತ್ಯನಾರಾಯಣ. ಇದು ಭಕ್ತಿ ಪ್ರಧಾನವಾದ ಸಿನಿಮಾ. ಅಚ್ಚರಿಯ ಸಂಗತಿ ಅಂದ್ರೆ ಈ ಸಿನಿಮಾದಲ್ಲಿ ಹರೀಶ್ ರಾಜ್ 16 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಸತ್ಯನಾರಾಯಣ ದೇವರ ಮಹಿಮೆಯನ್ನು ಸಾರುವ ಸಿನಿಮಾ ಇದಾಗಿದ್ದು, ನಟಿ ರಮ್ಯಾ ಬಾರ್ನೆ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಇವರದ್ದು ಸಿನಿಮಾದಲ್ಲಿ ಐದು ವಿಭಿನ್ನ ಪಾತ್ರಗಳು ಇವೆಯಂತೆ.
ಇನ್ನು ಒಬ್ಬ ನಟಿಯರಲಿ ಇಲ್ಲಾ ನಟನೇ ಇರಲಿ ಅವನು ಒಂದು ಸಿನಿಮಾದಲ್ಲಿ ಅನೇಕ ಪಾತ್ರಗಳನ್ನು ನಿರವಹಿಸೋದು ಅತ್ಯಂತ ಕಠಿಣವಾದ ಕೆಲಸ. ಹಾಗೇ ರಮ್ಯಾ ಅವರಿಗೂ ಸಿನಿಮಾದಲ್ಲಿ ಐದು ಪಾತ್ರಗಳಲ್ಲಿ ಕಾಣಿಸಿಕೊಳ್ಳೋದು ಬಹು ದೊಡ್ಡ ಸವಾಲಾಗಿತ್ತು ಅಂತಾ ಅವರು ಹೇಳಿದ್ದಾರೆ. ಇನ್ನುಳಿದಂತೆ ಸಿನಿಮಾದಲ್ಲಿ ಹಿರಿಯ ನಟ ರಾಮಕೃಷ್ಣ ಅಭಿನಯಿಸಿದ್ದಾರೆ. "ಎಡಕಲ್ಲು ಗುಡ್ಡದ ಮೇಲೆ' ಚಂದ್ರಶೇಖರ್ ಮತ್ತು ಜೈಜಗದೀಶ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಸಿದ್ದಾರೆ.