ಕೃಷ್ಣ ಲೀಲಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಗಾನ ಬಜಾನ

ಸೋಮವಾರ, 3 ನವೆಂಬರ್ 2014 (12:29 IST)
ಅಜಯ್  ಕೃಷ್ಣ ರಾವ್ ಅವರ ಅಭಿನಯದ , ಶಶಾಂಕ್ ಅವರ ನಿರ್ದೇಶನದ ಚಿತ್ರ ಕೃಷ್ಣಲೀಲಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಹಾಡಿದ್ದಾರೆ. ಈ ಚಿತ್ರಕ್ಕೆಂದು ಎರಡು ದಿನಗಳ ಹಿಂದೆ ಹಾಡಿದ್ದಾರೆ ಉಪ್ಪಿ ಎಂದು ಮೂಲಗಳಿಂದ ತಿಳಿದು ಬಂದಿದೆ. 
 
ಶಶಾಂಕ್ ಅವರ ನಿರ್ದೇಶನದ ಈ ಚಿತ್ರದಲ್ಲಿ ತಮ್ಮ ಕಂಠ ನೀಡಿರುವ ಉಪೇಂದ್ರ ಈ ಮುಖಾಂತರ ಮತ್ತೊಂದು ಸಿನಿಮಾದಲ್ಲಿ ತಮ್ಮ ಧ್ವನಿಯ ರಸಧಾರೆ ಹರಿಸಿದ್ದಾರೆ. ಈ ರೀತಿ ಸೂಪರ್ ಸ್ಟಾರ್ ಗಳ ಕಂಠ ಹೊಂದಿರುವ ಚಿತ್ರದ ವೀಡಿಯೋ ಬಂಪರ್ ಆಗಿ ಹೊರ ಬರುತ್ತದೆ ಎನ್ನುವ ನಿರೀಕ್ಷೆ ಹೊಂದಿದ್ದಾರೆ ನಿರ್ದೇಶಕ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ಮೊದಲು ಇದೇ ಚಿತ್ರಕ್ಕೆಂದು ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಹಾಡಿದ್ದರು. ಅದನ್ನು ನಾವು ಈ ಮೊದಲು ತಿಳಿಸಿದ್ದೆವು.
 
ಉಪ್ಪಿ ತಮ್ಮ ಧ್ವನಿಯನ್ನು ದುನಿಯಾ ವಿಜಯ್, ಶಿವರಾಜ್ ಕುಮಾರ್ , ಕೋಮಲ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಗಳಿಗೂ ಸಹಿತ ನೀಡಿದ್ದರು. ಈಗ ಅಜಯ್  ಚಿತ್ರದಲ್ಲೂ ನೀಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ