ಐಶಾನಿ ಹಾಗೂ ನೀನಾಸಂ ಸತೀಶ್ ಜೇನುನೋಣಗಳಿಂದ ಪಾರಾಗಿದ್ದು ಹೇಗೆ?

ಬುಧವಾರ, 25 ನವೆಂಬರ್ 2015 (11:10 IST)
ನೀನಾಸಂ ಸತೀಶ್ ನಿರ್ಮಾಣ ಹಾಗೂ ಅಭಿನಯದಲ್ಲಿ ಮೂಡಿ ಬರುತ್ತಿರುವ ರಾಕೆಟ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಆದ್ರೆ ಸಿನಿಮಾದ ಶೂಟಿಂಗ್ ವೇಳೆ ನಡೆದ ಘಟನೆಯೊಂದನ್ನು ನೆನಸಿಕೊಂಡರೆ ಇವತ್ತು ಮೈ ನಡುಗುತ್ತೆ ಅಂತಾ ಸಿನಿಮಾದ ನಾಯಕಿ ಐಶಾನಿ ಶೆಟ್ಟಿ ಹೇಳಿದ್ದಾರೆ. ಅದು ಅವರ ಜೀವನದಲ್ಲಿ ಅವರು ಯಾವತ್ತಿಗೂ ಮರೆಯಲಾರದ ಘಟನೆಯಂತೆ.

ಅಂದ್ಹಾಗೆ ಐಶಾನಿ ಶೆಟ್ಟಿ ಹಾಗೂ ನೀನಾಸಂ ಸತೀಶ್ ಅವರನ್ನು ಆವತ್ತು ಅಷ್ಟರ ಮಟ್ಟಿಗೆ ನಡುಗಿಸಿದ್ದು ಯಾರು ಗೊತ್ತಾ ಜೇನು ಹುಳಗಳು. ನೀನಾಸಂ ಸತೀಶ್ ಹಾಗೂ ಐಶಾನಿ ನಡುವಿನ ದೃಶ್ಯವೊಂದನ್ನು ಚಿತ್ರೀಕರಿಸಲಾಗುತ್ತಿತ್ತಂತೆ. ಲಾಂಗ್ ಶಾಟ್ ಆದ್ದರಿಂದ ಸಿನಿಮಾ ತಂಡ ಇವರಿಂದ ಸ್ಪಲ್ಪ ದೂರದಲ್ಲಿದಂತೆ. ಇದೇ ಕೆಲವರು ಓಡಿಕೊಂಡು ಬರೋದನ್ನು ಐಶಾನಿ ನೋಡಿದ್ರಂತೆ. ಅವರ ಕಿರುಚಾಟ ನೋಡಿ ಇವರಿಗೂ  ಭಯ ಶುರುವಾಯಿತಂತೆ.ಆದ್ರೆ ಅಲ್ಲಿ ಏನ್ ನಡೆಯುತ್ತಿದೆ ಅನ್ನೋದು ಗೊತ್ತಾಗಿರಲಿಲ್ಲವಂತೆ. ಯಾವುದರ ಅರಿವೇ ಇಲ್ಲದೇ ಅಲ್ಲೇ ಇದ್ದ ಕಂಬಳಿಯ ಒಳಗೆ ಅಡಿ ಕುಳಿತ್ರಂತೆ. ಬಳಿಕ ಗೊತ್ತಾಯಿತಂತೆ ಅದು ಜೇನು ಹುಳಗಳು ಅಟ್ಟಿಸಿಕೊಂಡು ಬಂದಿರೋದು ಅಂತಾ. ಆದ್ರೆ ಇಬ್ಬರಿಗೂ ಏನೂ ಅಪಾಯ ಆಗಲಿಲ್ಲವಂತೆ.
 
ಇನ್ನು ಸಿನಿಮಾ ತಂಡದವರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲವಂತೆ.ಆದ್ರೆ ಸಿನಿಮಾ ಶೂಟಿಂಗ್ ಕಳೆದು ಕೆಲವು ದಿನಗಳೇ ಕೆಳೆದ್ರೂ ಇಂದಿಗೂ ಐಶಾನಿಗೆ ಆ ಘಟನೆಯನ್ನು ನೆನೆದ್ರೆ ಮೈ ಜುಮ್ಮೆನ್ನುತಂತೆ. ಇದನ್ನು ಯಾವತ್ತೂ ಮರೆಯಲಾರೆ ಅಂತಾ ಐಶಾನಿ ಹೇಳಿದ್ದಾರೆ.

ಇನ್ನು ಸಿನಿಮಾ ತಂಡದವರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲವಂತೆ.ಆದ್ರೆ ಸಿನಿಮಾ ಶೂಟಿಂಗ್ ಕಳೆದು ಕೆಲವು ದಿನಗಳೇ ಕೆಳೆದ್ರೂ ಇಂದಿಗೂ ಐಶಾನಿಗೆ ಆ ಘಟನೆಯನ್ನು ನೆನೆದ್ರೆ ಮೈ ಜುಮ್ಮೆನ್ನುತಂತೆ. ಇದನ್ನು ಯಾವತ್ತೂ ಮರೆಯಲಾರೆ ಅಂತಾ ಐಶಾನಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ