ಅಂದ್ಹಾಗೆ ಐಶಾನಿ ಶೆಟ್ಟಿ ಹಾಗೂ ನೀನಾಸಂ ಸತೀಶ್ ಅವರನ್ನು ಆವತ್ತು ಅಷ್ಟರ ಮಟ್ಟಿಗೆ ನಡುಗಿಸಿದ್ದು ಯಾರು ಗೊತ್ತಾ ಜೇನು ಹುಳಗಳು. ನೀನಾಸಂ ಸತೀಶ್ ಹಾಗೂ ಐಶಾನಿ ನಡುವಿನ ದೃಶ್ಯವೊಂದನ್ನು ಚಿತ್ರೀಕರಿಸಲಾಗುತ್ತಿತ್ತಂತೆ. ಲಾಂಗ್ ಶಾಟ್ ಆದ್ದರಿಂದ ಸಿನಿಮಾ ತಂಡ ಇವರಿಂದ ಸ್ಪಲ್ಪ ದೂರದಲ್ಲಿದಂತೆ. ಇದೇ ಕೆಲವರು ಓಡಿಕೊಂಡು ಬರೋದನ್ನು ಐಶಾನಿ ನೋಡಿದ್ರಂತೆ. ಅವರ ಕಿರುಚಾಟ ನೋಡಿ ಇವರಿಗೂ ಭಯ ಶುರುವಾಯಿತಂತೆ.ಆದ್ರೆ ಅಲ್ಲಿ ಏನ್ ನಡೆಯುತ್ತಿದೆ ಅನ್ನೋದು ಗೊತ್ತಾಗಿರಲಿಲ್ಲವಂತೆ. ಯಾವುದರ ಅರಿವೇ ಇಲ್ಲದೇ ಅಲ್ಲೇ ಇದ್ದ ಕಂಬಳಿಯ ಒಳಗೆ ಅಡಿ ಕುಳಿತ್ರಂತೆ. ಬಳಿಕ ಗೊತ್ತಾಯಿತಂತೆ ಅದು ಜೇನು ಹುಳಗಳು ಅಟ್ಟಿಸಿಕೊಂಡು ಬಂದಿರೋದು ಅಂತಾ. ಆದ್ರೆ ಇಬ್ಬರಿಗೂ ಏನೂ ಅಪಾಯ ಆಗಲಿಲ್ಲವಂತೆ.