Hritik Roshan: ಬೆಳೆದ ಮೇಲೆ ಕನ್ನಡಿಗರು ಕಾಣಲ್ವಾ: ಹೊಂಬಾಳೆ ಫಿಲಂಸ್ ವಿರುದ್ಧ ಕನ್ನಡಿಗರ ಕಿಡಿ

Krishnaveni K

ಗುರುವಾರ, 29 ಮೇ 2025 (09:31 IST)
Photo Credit: X
ಬೆಂಗಳೂರು: ಕನ್ನಡದ ಶ್ರೀಮಂತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ನಿನ್ನೆ ಬಾಲಿವುಡ್ ತಾರೆ ಹೃತಿಕ್ ರೋಷನ್ ಅವರ ಜೊತೆಗೆ ಹೊಸ ಸಿನಿಮಾ ಘೋಷಣೆ ಮಾಡಿತ್ತು. ಇದಕ್ಕೆ ಕನ್ನಡಿಗರು ಕಿಡಿ ಕಾರಿದ್ದು ನಿಮಗೆ ಬೆಳೆದ ಮೇಲೆ ಕನ್ನಡ ನಟರು ಕಾಣಲ್ವಾ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಮುಂದಿನ ಸಿನಿಮಾ ಹೃತಿಕ್ ರೋಷನ್ ಜೊತೆಗೆ ಎಂದು ಹೊಂಬಾಳೆ ಫಿಲಂಸ್ ಘೋಷಿಸುತ್ತಿದ್ದಂತೇ ಹಲವಾರು ಕಾಮೆಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಬಂದಿದೆ. ಬೆಳೆಯುವವರೆಗೂ ನಿಮಗೆ ಕನ್ನಡ ಬೇಕು. ಬೆಳೆದ ಮೇಲೆ ಕನ್ನಡ ನಟರು ಕಾಣೋದಿಲ್ವಾ? ಎಂದು ಕಿಡಿ ಕಾರಿದ್ದಾರೆ.

ಕೆಜಿಎಫ್ ಸಿನಿಮಾ ಹಿಟ್ ಆದ ಬಳಿಕ ಹೊಂಬಾಳೆ ಫಿಲಂಸ್ ಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಇದಾದ ಬಳಿಕ ಹೊಂಬಾಳೆ ಫಿಲಂಸ್ ಸಲಾರ್ ಸಿನಿಮಾ ಮಾಡಿತ್ತು. ಇದೂ ಕೂಡಾ ತೆಲುಗು ನಟ ಪ್ರಭಾಸ್ ಜೊತೆಗೆ. ಇನ್ನೊಂದು ಸಿನಿಮಾ ಕೀರ್ತಿ ಸುರೇಶ್ ಜೊತೆಗೆ ಮಾಡಿತ್ತು. ಈಗಾಗಲೇ ಮಲಯಾಳಂ ನಟ ಪೃಥ್ವಿರಾಜ್ ನಾಯಕರಾಗಿ ಒಂದು ಸಿನಿಮಾ ಘೋಷಿಸಿದೆ. ಒಟ್ಟಿನಲ್ಲಿ ಎಲ್ಲವೂ ಪರಭಾಷಾ ಸ್ಟಾರ್ ಗಳನ್ನಿಟ್ಟುಕೊಂಡೇ.

ಇದೇ ಕಾರಣಕ್ಕೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಕನ್ನಡದಲ್ಲಿ ಸುದೀಪ್, ಯಶ್, ದರ್ಶನ್, ಧ್ರುವ ಸರ್ಜಾರಂತಹ ಹೀರೋಗಳಿದ್ದಾರೆ. ಅವರು ಬೇಡ ಎಂದರೆ ಇತ್ತೀಚೆಗೆ ಬಂದ ವಿರಾಟ್ ನಂತಹ ಯುವ ಭರವಸೆಯ ನಟರಿದ್ದಾರೆ. ಅವರನ್ನು ಬೆಳೆಸುವ ಪ್ರಯತ್ನ ಮಾಡಬಹುದಲ್ವೇ? ಯಾಕೆ ಯಾವಾಗಲೂ ಪರಭಾಷಾ ನಟರನ್ನೇ ಹಾಕಿ ಸಿನಿಮಾ ಮಾಡ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ