ತ್ರಿಷಾ ಮದುವೆ ಮುರಿದು ಬಿದ್ದಿದ್ದಕ್ಕೆ ಖುಷಿ: ಲಕ್ಷ್ಮಿ ರೈ

ಶುಕ್ರವಾರ, 22 ಮೇ 2015 (10:24 IST)
ಇದಕ್ಕೆ ಅಸೂಯೆ ಎನ್ನ ಬೇಕೋ ಅಥವಾ ಹೊಟ್ಟೆ ಉರಿ ಎಂದು ಹೇಳ ಬೇಕೋ ಗೊತ್ತಿಲ್ಲಾ, ಯಾಕೇಂದ್ರೆ ನಿಮಗೆಲ್ಲರಿಗೂ ಗೊತ್ತಿರುವಂತೆ ದಕ್ಷಿಣ ಭಾರತದ ಗ್ಲಾಮರ್ ನಟಿ ತ್ರಿಷ ಮದುವೆ ಮುರಿದು ಹೋಗಿದೆ. ನಿಶ್ಚಿತಾರ್ಥ ಆದ ನಂತರ ಆಕೆ ವಿವಾಹ ಮುರಿದು ಆಕೆ ಈಗ ಸಂಪೂರ್ಣವಾಗಿ ತನ್ನನ್ನು ತಾನು ಸಿನಿಮಾ ನಟನೆಯತ್ತ ತೊಡಗಿಸಿಕೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿ. ವಿಷ್ಯ ಅದಲ್ಲ, ಆಕೆಯ ಬದುಕಿನಲ್ಲಿ ಈ ರೀತಿ ಏರುಪೇರಾದ ಬಗ್ಗೆ ಲಕ್ಷ್ಮಿ ರೈ ಎನ್ನುವ ಚೆಲುವೆ ಖುಷಿ ಆಗಿದೆ ಎನ್ನುವ ಸುದ್ದಿ ಗಾಢವಾಗಿ ಹರಡಿದೆ ಕಾಲಿವುಡ್ ಮಾಧ್ಯಮಗಳಲ್ಲಿ.ಲಕ್ಷ್ಮಿ ರೈ  ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ರಾಯ್ ಲಕ್ಷ್ಮಿ ಎನ್ನುವ ಹೆಸರಿನಿಂದ ಜನಪ್ರಿಯರಾಗಿದ್ದಾರೆ. ಆಕೆ ಕನ್ನಡತಿಯಾದರೂ ಬೆಳೆದದ್ದು ಬೇರೆ ಭಾಷೆಗಳಲ್ಲಿ. ಆರಂಭದಲ್ಲಿ ಲಕ್ಷ್ಮಿ ಮತ್ತು ತ್ರಿಷ ಉತ್ತಮ ಸ್ನೇಹಿತೆಯರಾಗಿದ್ದರು. ಆದರೆ ಒಂದು ವಿಷಯದಲ್ಲಿ ಇಬ್ಬರ ನಡುವೆ ವ್ಯತ್ಯಾಸ ಕಂಡು ಬಂದು ಅದು ಸ್ನೇಹದ ಬಿರುಕಿಗೆ ಕಾರಣವಾಯ್ತು. ಅದೇ ವರುಣ್ ಮಣಿಯನ್ ಜೊತೆಗಿನ ನಿಶ್ಚಿತಾರ್ಥ.
ಈ ಮೊದಲು ವರುಣ್ ಜೊತೆ ಲಕ್ಷ್ಮಿ ಡೇಟಿಂಗ್ ಮಾಡುತ್ತಾ ಹಾಯಾಗಿದ್ದರು. ಆದರೆ ಯಾವಾಗ ಈಕೆ ತ್ರಿಷಾಗೆ ವರುಣ್ ಅವರ ಜೊತೆ ಪರಿಚಯ ಮಾಡಿಸಿದರೋ ವರುಣ್ ಗಮನ ತ್ರಿಷ ಕಡೆಗೆ  ಹೋಗಿ ಅದು ನಿಶ್ಚಿತಾರ್ಥದ ತನಕ ಹೋಗಿತ್ತು. ತನ್ನ ಸ್ನೇಹಿತೆಯ ಬದುಕಿನ ಈ ಬೆಳವಣಿಗೆಯಿಂದ ನೊಂದಿದ್ದ ಲಕ್ಷ್ಮಿಗೆ ವರುಣ್ ಹಾಗೂ ತ್ರಿಷ ನಡುವಿನ ಪ್ರೀತಿ ಬ್ರೇಕ್ ಅಪ್ ಆಗಿದೆ ಎನ್ನುವ ಸಂಗತಿ ಹೆಚ್ಚು ಖುಷಿ ನೀಡಿದೆಯಂತೆ. ಆಕೆ ಅದಕ್ಕಾಗಿ ತನ್ನ ಗೆಳತಿಯರಿಗೆ ಪಾರ್ಟಿ ನೀಡಿದ್ದಾರೆ ಎನ್ನುವ ಸುದ್ದಿಯೂ ಗುದ್ದು ಕೊಡ್ತಾ ಇದೆ.  ನಾನು ಮೊದಲೇ ಹೇಳಿದ್ದೆ ಈ ಮದುವೆ ನಡೆಯಲ್ಲ ಅಂತ.. ನಾನು ಹೇಳಿದಂತೆ ಆಗುತ್ತಿದೆ ಎನ್ನುವ ಮಾತನ್ನು ಆಕೆ ಹೇಳಿದ್ದಾರೆ. ಈ ಸಂಗತಿ ನಿಜವೇ ಆಗಿದ್ದಲ್ಲಿ ಇಷ್ಟು   ಅಸೂಯೆ ಇರಬಾರದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.. ಇದಕ್ಕೆ ನೀವೇನು ಅಂತೀರಿ ಓದುಗರೇ ?!

ವೆಬ್ದುನಿಯಾವನ್ನು ಓದಿ