ನನಗೆ ಆ ರೀತಿ ಇರುವುದೇ ಇಷ್ಟ ಎಂದ ರಜನಿಕಾಂತ್

ಭಾನುವಾರ, 5 ಫೆಬ್ರವರಿ 2017 (11:56 IST)
ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ಅವರ ಅಭಿಮಾನಿಗಳಿಗೆ ಬಿಡಿಸಿ ಹೇಳಬೇಕಾಗಿಲ್ಲ. ಸಮಯ ಸಿಕ್ಕಿದರೆ ಸಾಕು ಹಿಮಾಲಯಕ್ಕೆ ಹೊರಟುಬಿಡುತ್ತಿರುತ್ತಾರೆ. ಧ್ಯಾನ, ಆಧ್ಯಾತ್ಮದ ಪ್ರಪಂಚದಲ್ಲಿ ಕಳೆದುಬಿಡುತ್ತಾರೆ. ಇದನ್ನು ಅವರು ಸಾಕಷ್ಟು ಸಲ ಹೇಳಿಕೊಂಡಿದ್ದಾರೆ.
 
"ಒಬ್ಬ ನಟನಾಗಿರುವುದಕ್ಕಿಂತ ಆಧ್ಮಾತ್ಮಿಕವಾಗಿ ಜೀವಿಸುವುದೆ ತನಗಿಷ್ಟ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾತನಾಡುತ್ತಾ, ಹಣ, ಹೆಸರಿನ ಜನಪ್ರಿಯತೆಗಿಂತ ಆಧ್ಯಾತ್ಮಿಕವಾಗಿ ಜೀವಿಸುವುದು ತನಗಿಷ್ಟ. ಆಧ್ಯಾತ್ಮ ಎಂಬುದು ಎಲ್ಲದಕ್ಕಿಂತ ಶಕ್ತಿಯುಳ್ಳದ್ದು" ಎಂದಿದ್ದಾರೆ.
 
ರಜನಿಕಾಂತ್ ಅವರ ಈ ಹೇಳಿಕೆ ಈಗ ಅವರ ಅಭಿಮಾನಿಗಳಲ್ಲಿ, ಉದ್ಯಮದಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಸದ್ಯಕ್ಕೆ ಶಂಕರ್ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ 2.0 ಚಿತ್ರದಲ್ಲಿ ರಜನಿಕಾಂತ್ ಅಭಿನಯಿಸಿದ್ದು ಆ ಚಿತ್ರ ಇನ್ನೇನು ತೆರೆಗೆ ಬರಲು ಸಿದ್ಧವಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ