ಸಮಂತ ಋತು ಪ್ರಭು ಈಗ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬಳು. ಆಕೆ ತನ್ನ ಮುಂದಿನ ಚಿತ್ರದಲ್ಲಿ ಟಾಲಿವುಡ್ ನ ಸುದೀಪ್ ಕೃಷ್ಣ ಅವರ ಜೊತೆ ನಟಿಸುತ್ತಾಳೆ ಎನ್ನುವ ಸುದ್ದಿ ಟಿ-ಪಟ್ಟಣದಲ್ಲಿ ಸಿಕ್ಕಾಪಟ್ಟೆ ಹರಡಿತ್ತು. ವಿವಿ ವಿನಾಯಕ್ ಅವರ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತದೆ ಎನ್ನುವ ಸುದ್ದಿಗೂ ಸಹಿತ ಅಧಿಕ ಪ್ರಾಮುಖ್ಯತೆ ಸಿಕ್ಕಿತ್ತು. ಆದರೆ ಸಮ್ಮು ಆ ಚಿತ್ರದಲ್ಲಿ ನಟಿಸುತ್ತಿಲ್ಲ ಎನ್ನುತ್ತಿದೆ ಆಕೆ ಆಪ್ತವಲಯ.
ಆಕೆಗೆ ಪ್ರಸ್ತುತ ಬ್ರಹ್ಮೋತ್ಸವಂ ಚಿತ್ರದಲ್ಲಿ ಮಾತ್ರ ನಟಿಸುತ್ತಿರುವುದು. ಅದನ್ನು ಹೊರೆತು ಪಡಿಸಿ ಮತ್ಯಾವುದೇ ಚಿತ್ರದಲ್ಲಿ ಇಲ್ಲ ಎನ್ನುವ ಅಂಶಕ್ಕೆ ಹೆಚ್ಚು ಪುಷ್ಟಿ ಸಿಕ್ಕಿದೆ. ಅಲ್ಲದೆ ಆಕೆ ಅಕಸ್ಮಾತ್ ಹೊಸಬರ ಜೊತೆ ಮಾಡ ಬೇಕಾದಲ್ಲಿ ಆಕೆಯ ಪಾತ್ರ ಪ್ರಧಾನವಾಗಿರಬೇಕು, ಹೀರೋ ಪಾತ್ರವಲ್ಲ ಎನ್ನುವ ಸಂಗತಿ ಹೇಳಿದ್ದಾರೆ ಆಕೆಯ ಆಪ್ತರು.