ಬಿಗ್ ಬಾಸ್ ಮನೆಯಿಂದ ಹುಚ್ಚ ವೆಂಕಟ್ ಹೊರ ಬಿದ್ದಿದ್ದೆ ತಡ ವೆಂಕಟ್ ಅವರನ್ನು ಮತ್ತೆ ಮನೆಗೆ ಕರೆ ತರಬೇಕು ಅಂತಾ ಅಭಿಮಾನಿಗಳ ಕೂಗು ಜೋರಾಗುತ್ತಲೇ ಇದೆ. ಕಲರ್ಸ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ರವ್ ಗುಂಡ್ಕಲ್ ಅವರು ಈಗಾಗಲೇ ವೆಂಕಟ್ ಅವರನ್ನು ಮನೆಗೆ ಕರೆ ತರೋದಿಲ್ಲ ಅಂತಾ ಸ್ಪಷ್ಟನೆ ನೀಡಿದ್ರೂ, ಅವರು ವಾಪಸ್ ಬರ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದ್ದವು. ಆದ್ರೆ ಇದೀಗ ಈ ಬಗ್ಗೆ ಹುಚ್ಚ ವೆಂಕಟ್ ಅವರೇ ಬಾಯ್ಬಿಟ್ಟಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹುಚ್ಚ ವೆಂಕಟ್ ಯಾವುದೇ ಕಾರಣಕ್ಕೂ ನಾನು ಆ ಮನೆಗೆ ಹೋಗೋದಿಲ್ಲ. ಅಲ್ಲಿ ನಾನು ನಾನೀಗಿರೋದಕ್ಕೆ ಅವಕಾಶ ಇರೋದಿಲ್ಲ. ನಾಟಕ ಮಾಡಿಕೊಂಡು ಅಲ್ಲಿ ಇರಲು ನನಗೆ ಬರೋದಿಲ್ಲ. ಹಾಗಾಗಿ ನಾನು ಯಾವುದೇ ಕಾರಣಕ್ಕೆ ಬಿಗ್ ಬಾಸ್ ಮನೆಗೆ ಹೋಗೋದಿಲ್ಲ ಅಂತಾ ಹುಚ್ಚ ವೆಂಕಟ್ ಹೇಳಿದ್ದಾರೆ. ಆ ಮೂಲಕ ಹುಚ್ಚ ವೆಂಕಟ್ ಮತ್ತೆ ಮನೆಗೆ ಬರ್ತಾರೋ ಅಂತಾ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳ ಆಸೆಗೆ ವೆಂಕಟ್ ತಣ್ಣೀರೆರಚಿದ್ದಾರೆ.