ಈಕೆ ಅಷ್ಟೊಂದು ಕೋಪ ಮಾಡಿಕೊಳ್ಳಲು ಮುಖ್ಯ ಕಾರಣ ಶ್ವೇತ ಬಗ್ಗೆ ಹರಡಿದ್ದ ಸಂಗತಿ. ರೆಸ್ಕ್ಯೂ ಹೋಂ ನಲ್ಲಿ ಇದ್ದಾಗ ತನ್ನ ತಾಯಿ ತಂದೆ ಜೊತೆಗೆ ಮಾತನಾಡಲು ಅವಕಾಶ ಸಿಗಲಿಲ್ಲ, ಅಂತಹುದರಲ್ಲಿ ಆ ಜರ್ನಲಿಸ್ಟ್ ಜೊತೆ ಹೇಗೆ ಮಾತನಾಡಲು ಸಾಧ್ಯ, ತನ್ನ ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆ ಎಂದು ವ್ಯಗ್ರಳಾಗಿ ಹೇಳಿದ್ದಾಳೆ ಆಕೆ.
ಶ್ವೇತ ಕೆರಿಯರ್ ಮುಗಿದಂತೆ ಎಂದು ಹೇಳಿ ನನ್ನ ಪ್ರತಿಷ್ಠೆಗೆ ಭಂಗ ತಂದಿದ್ದಾರೆ ಎಂದು ಅಲ್ಲದೆ ತನ್ನ ಬಗ್ಗೆ ಸುಳ್ಳು ಸುದ್ದಿ ಹರಡಿರುವ ಆ ಪೇಪರ್ ಮತ್ತು ಆ ಜರ್ನಲಿಸ್ಟ್ ಬಗ್ಗೆ ತಾನು ವಿವರ ಶೇಖರಿಸಿರುವುದಾಗಿ ಹೇಳಿದ್ದು, ಸೂಕ್ತ ನ್ಯಾಯಾಂಗ ತನಿಖೆಯತ್ತ ಆದ್ಯತೆ ನೀಡುವುದಾಗಿ ಸಹ ತಿಳಿಸಿದ್ದಾಳೆ.
ತಾನು ಅರೆಸ್ಟ್ ಆದಾಗ ಒಂದಷ್ಟು ಸಿನಿಮಾ ಅವಕಾಶಗಳು ಸಹಿತ ತನ್ನ ಕೈಲಿ ಇದ್ದುದರ ಬಗ್ಗೆ ತಿಳಿಸಿದ್ದಾಳೆ. ಸಿನಿಮಾ ರಂಗದಲ್ಲೂ ಸಹಿತ ತನಗೆ ಉತ್ತಮ ಬಾಂಧವ್ಯ ಇದ್ದು, ಉತ್ತಮ ಸ್ನೇಹಿತರು ಇದ್ದಾರೆ ಎಂದು ಹೇಳಿದ್ದಾಳೆ. ಅವರೆಲ್ಲರೂ ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿದ್ದರು ಎಂದು ಸಹಿತ ಆಕೆ ತಿಳಿಸಿದ್ದಾಳೆ.
ನಾನು ಒಂದು ಅವಾರ್ಡ್ ಫಂಕ್ಷನ್ ಗೆ ಹೋಗಿದ್ದೆ. ಅದಕ್ಕೆಂದು ನಿರ್ಮಾಪಕರು ರೂಂ ಬುಕ್ ಮಾಡಿದ್ದರು. ನನ್ನ ಬಳಿ ಅದರ ಟಿಕೆಟ್ ಇದೆ, ದುರಾದೃಷ್ಟ ಎಂದರೆ ಅಂದೇ ನಾನು ಅರೆಸ್ಟ್ ಆದೆ ಎಂದಿರುವ ಶ್ವೇತ ರೆಸ್ಕ್ಯೂ ಹೋಂ ನಲ್ಲಿ ಇರುವಷ್ಟು ಕಾಲ ಆಕೆ ಅಕ್ರಮ ಮಾನವ ಸಾಗಾಣಿಕೆಯಲ್ಲಿ ದೊರಕಿದ ಮಕ್ಕಳಿಗೆ ಟೀಚರ್ ಸೇವೆ ನೀಡಿದೆ, ಅವರೆಲ್ಲರಿಗೂ ಹಿಂದಿ, ಇಂಗ್ಲೀಷ್ ಅಲ್ಲದೆ ಶಾಸ್ತ್ರೀಯ ಸಂಗೀತ ಕಲಿಸಿದಳಂತೆ.