ಇನ್ನು ನಾಯಕನಾಗಿಯೇ ಚಾಲ್ತಿಯಲ್ಲಿದ್ದೇನೆ ನಾನು ಖಳನಟನಾಗಿ ನಟಿಸ್ತೀನಾ ?

ಗುರುವಾರ, 25 ಸೆಪ್ಟಂಬರ್ 2014 (14:26 IST)
ಸಾಮಾನ್ಯವಾಗಿ ಸುದ್ದಿಗಳು ಅದು ಹೇಗೆ ಹರಡುತ್ತದೆಯೋ ಗೊತ್ತಿಲ್ಲ.. ಆದರೆ ಅದನ್ನು ಬಣ್ಣದಿಂದ ಮತ್ತಷ್ಟು ರಂಜಿತವಾಗಿ ಹರಡುವ ಮಂದಿಯೂ ಸಹಿತ ಹೇರಳವಾಗಿದ್ದಾರೆ. ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲೂ ಅರ್ಜುನ್ ಅವರ ಮುಂದಿನ ಚಿತ್ರಕ್ಕೆ ಅರ್ಜುನ್ ಸರ್ಜಾ ಅವರು ವಿಲನ್ ಆಗಿ ಮಾಡ್ತಾರೆ ಎನ್ನುವ ಸುದ್ದಿ ಹರಡಿತ್ತು. 

ಆದ್ರೆ ಈ ಸುದ್ದಿಯ ಬಗ್ಗೆ ನಾಯಕ ಅರ್ಜುನ್ ಸರ್ಜಾ ಅಲ್ಲೆಗಳೆದಿದ್ದಾರೆ. ನನಗೆ ಖಳನಾಯಕನಾಗಿ ನಟಿಸುವ  ಅಗತ್ಯತೆ ಇಲ್ಲ ಎಂದು ಹೇಳಿದ್ದಾರೆ. ಈಗ ನಾನಿನ್ನು ಹೀರೋ ಆಗಿ ನಟಿಸುತ್ತಿದ್ದೇನೆ. ಉಳಿದ ಪಾತ್ರಗಳಲ್ಲಿ ನಟಿಸಲು ನನಗೆ ವೇಳೆಯೇ ಇಲ್ಲ. ಅಲ್ಲೂ ಅರ್ಜುನ್ ಚಿತ್ರದಲ್ಲಿ ವಿಲನ್ ಆಗುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ ಅರ್ಜುನ್ 
 
ಹೀರೋ ಪಾತ್ರಗಳು, ನಿರ್ದೇಶನದಿಂದ ನಾನು ಸಂತೋಷವಾಗಿದ್ದೇನೆ . ಇಂತಹ ಸಮಯದಲ್ಲಿ ನೆಗೆಟಿವ್ ಪಾತ್ರಗಳಲ್ಲಿ ಹೇಗೆ  ನಟಿಸುವ ಯೋಚನೆ ಮಾಡ್ತೀನಿ ಎಂದು ಹೇಳಿದ್ದಾರೆ ಅವರು.ಅರ್ಜುನ್  ಸಿದ್ಧ ಮಾಡಿರುವ ಜೈ ಹಿಂದ್-2  ಚಿತ್ರ ಈಗ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಸಿದ್ಧ ಆಗ್ತಾ ಇದೆ . ಆದರೆ ಅರ್ಜುನ್ ಬದಲಾಗಿ ಕನ್ನಡದ ಸೂಪರ್ ರಂಗ ಉಪೇಂದ್ರ ಅಲ್ಲೂ ಅರ್ಜುನ್ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸುತ್ತಾ ಇದ್ದಾರಂತೆ...! ಹೌದೆ?!  

ವೆಬ್ದುನಿಯಾವನ್ನು ಓದಿ