ನಾನು ಬಂದ ಮೇಲೆ ನಂದೇ ಹವಾ....?!

ಬುಧವಾರ, 24 ಡಿಸೆಂಬರ್ 2014 (10:00 IST)
ಸಾಮಾನ್ಯವಾಗಿ ಟಾಲಿವುಡ್ ನಲ್ಲಿ ಆಗಿರಲಿ ಕಾಲಿವುಡ್ ನಲ್ಲಿಯೇ ಆಗಿರಲಿ ಹೀರೋಗಳ ನಡುವೆ ಅಥವಾ ರಾಜಕೀಯ ಪ್ರತಿನಿಧಿಗಳನ್ನೂ ಕುರಿತು ಡೈಲಾಗ್ ಮೂಲಕ ತಮ್ಮ ಅಭಿಪ್ರಾಯ ಹೇಳುವ ಹೀರೋಗಳ ಸಿನಿಮಾ ಬೇಕಾದಷ್ಟಿದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಆ ಪರಂಪರೆಗೆ ಅಷ್ಟೊಂದು ಪ್ರಾಮುಖ್ಯತೆ ನೀಡಿಲ್ಲ. ಕೆಲವು ವರ್ಷಗಳ ಹಿಂದೆ ದರ್ಶನ್ ತಮ್ಮ ಚಿತ್ರದಲ್ಲಿ ಸುದೀಪ್ ಕಡೆಗೆ ಮಾತಿನ ಬಾಣ ಎಸೆದಿದ್ದರು. 
ಆ ಬಳಿಕ ಅದಕ್ಕೆ ಹೆಚ್ಚಿನ ಮಹತ್ವ ಸಿಕ್ಕಿರಲಿಲ್ಲ. ಆದರೆ ಈಗ ಹೆಚ್ಚು ಅವಕಾಶಗಳು ಮತ್ತು ಗೆಲುವನ್ನು ಪಡೆಯುತ್ತಿರುವ ನಟ ಯಶ್ ತನ್ನ ಸಿನಿಮಾದಲ್ಲಿ ಹೇಳಿರುವ ಡೈಲಾಗ್ ಎಲ್ಲರ ಬಾಯಿಗೆ ಮಾತಿನ ಆಹಾರವಾಗಿದೆ. ಅವರ ಹೊಚ್ಚಹೊಸ ಚಿತ್ರ ಮಿಸ್ಟರ್ ಅಂಡ್ ಮಿಸೆಸ್  ರಾಮಾಚಾರಿ ಯಲ್ಲಿ ಅಂತಹ ಒಂದು ಡೈಲಾಗ್ ಇದೆ. ಆ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಯ್ತು. ಅದರಲ್ಲಿ ಈ ಸಂಗತಿ ಎದ್ದು ಕಾಣುತ್ತಿದ್ದು, ಚಂದನವನದ ನಿವಾಸಿಗಳಿಗೆ ಮಾತಿಗೆ ಗ್ರಾಸವಾಗಿದೆ. 
 
ನಾನು ಬರೋತನಕ ಬೇರೆಯವರ ಹವಾ  ನಾನು ಬಂದ ಮೇಲೆ ನಂದೇ ಹವಾ .  ಈ ಅಂಶ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಆದರೆ  ಯಶ್   ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಓರ್ವ ಆದರೆ ಹಿರಿಯ ಕಲಾವಿದರು ತುಂಬಾ ಬೇಗ ಏರಿದವರು ಅಷ್ಟೇ ಶೀಘ್ರವಾಗಿ ಕೆಳಗಿಳಿಯುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ಕಾಲವೇ ತಿಳಿಸುತ್ತದೆ. 
 
ಈ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾತ್ರ  ಇದು ಯಶ್ ಮತ್ತು ಖಳನಾಯಕನ ನಡುವೆ ನಡೆಯುವ ಸಂಭಾಷಣೆ ಎಂದು ಹೇಳಿ ಸಮಸ್ಯೆ ಹರಡದಂತೆ ಮಾಡಿದ್ದಾರೆ. ಆದರೂ ಸಹಿತ ಇದು ಒಂದು ಬಗೆ ಸ್ಟಾರ್ ವಾರ್  ಅಂತ ಗಾಂಧಿನಗರಿಗರ ಊಹೆ. 
 

ವೆಬ್ದುನಿಯಾವನ್ನು ಓದಿ