'ಐರಾವತ'ದ ಸಾಹಸ ದೃಶ್ಯಗಳ ಚಿತ್ರೀಕರಣ ತಿರುಪತಿ ರಸ್ತೆಯಲ್ಲಿ

ಶನಿವಾರ, 23 ಮೇ 2015 (10:20 IST)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಬಹು ನಿರೀಕ್ಷಿತ ಚಿತ್ರ ಐರಾವತ. ಆ ಚಿತ್ರವನ್ನು ಎ ಪಿ ಅರ್ಜುನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ಈಗಾಗಲೇ ಅಂಬಾರಿ, ಅದ್ಧೂರಿ ಯಶಸ್ವಿ ಚಿತ್ರದ ಜೊತೆಗೆ ರಾಟೆ ಚಿತ್ರವನ್ನು ನಿರ್ದೇಶಿಸಿ ಗೆದ್ದಿರುವ ನಿರ್ದೇಶಕ. ಅವರು ಈಗ ಐರಾವತವನ್ನು ಸಹಿತ ಕಳೆದ ಕೆಲವು ತಿಂಗಳುಗಳಿಂದ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಸಾಹಸ ದೃಶ್ಯಗಳು ಹಳೆಯ ತಿರುಪತಿ ರಸ್ತೆಯಲ್ಲಿ ಕಳೆದ ಆರು ದಿನಗಳಿಂದ ನಿರಂತರವಾಗಿ ನಡೆಯಿತು. ಭಾರಿ ಮೊತ್ತದಲ್ಲಿ ಶೂಟ್ ಮಾಡಿದ ಸಾಹಸ ದೃಶ್ಯಗಳಲ್ಲಿ  ರಾಮ್ ಲಕ್ಷ್ಮಣ್ ಅವರು ಭಾಗವಹಿಸಿದ್ದರು. 
ದರ್ಶನ್, ಊರ್ವಶಿ ರುಟೆಲಾ, ಪ್ರಕಾಶ್ ರೈ , ಅಶೋಕ್, ಜಿಕೆ ಗೋವಿಂದ ರಾವ್ ಮತ್ತು ಸ್ಟಂಟ್ ಮ್ಯಾನ್  ಅಭಿನಯಿಸಿದ ಈ ದೃಶ್ಯಗಳ ಎಲ್ಲರ ಗಮನ ಸೆಳೆಯುವಂತೆ ಚಿತ್ರೀಕರಣವಾಯ್ತು. ಎರಡು ಯಶಸ್ವಿ ಚಿತ್ರಗಳನ್ನು ನೀಡಿದರೂ ಅರ್ಜುನ್ ನಿರ್ದೇಶನದ ಮೂರನೆಯ ಚಿತ್ರ ರಾಟೆ ಹೇಳಿಕೊಳ್ಳುವಂತಹ  ಗೆಲುವು ನೀಡಲಿಲ್ಲ. ಆದ ಕಾರಣ ದರ್ಶನ್ ಚಿತ್ರದ ಯಶಸ್ಸಿಗಾಗಿ ಅವರು ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಈಗ ಎಂಎಲ್ಎ ಆಗಿರುವ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ, ಶೇಖರ್ ಚಂದ್ರ ಕ್ಯಾಮರ, ದೀಪು ಎಸ್ ಕುಮಾರ್  ಎಡಿಟಿಂಗ್, ಕಲೈ ಗಣೇಶ್ ಡ್ಯಾನ್ಸ್, ರವಿ ವರ್ಮ ಸಾಹಸ , ಈಶ್ವರ್  ಕುಮಾರ್  ಕಲೆ ಈ ಚಿತ್ರಕ್ಕಿದೆ.  

ವೆಬ್ದುನಿಯಾವನ್ನು ಓದಿ