ಇತ್ತೀಚೆಗೆ ಮಲ್ಟಿಸ್ಟಾರರ್ ಚಿತ್ರಗಳ ನಿರ್ಮಾಣ ಭರದಿಂದ ಸಾಗಿದೆ. ಅದಕ್ಕೆ ತೆಲುಗು ಚಿತ್ರರಂಗ ಹೊರತಲ್ಲ. ಗೋಪಾಲ ಗೋಪಾಲ ವೆಂಕಟೇಶ್, ಪವನ್ ಕಲ್ಯಾಣ್ ಜೋಡಿಯಲ್ಲಿ ನಿರ್ಮಾಣವಾದ ಚಿತ್ರವಾಗಿದ್ದು ಅದು ಸೂಪರ್ ಹಿಟ್ ಆಗಿದೆ.ಮಣಿರತ್ನಂ ಅವರು ನಾಗಾರ್ಜುನ ಮತ್ತು ಮಹೇಶ್ ಬಾಬು ಅವರ ಜೋಡಿಯನ್ನು ಹಾಕಿಕೊಂಡು ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ನಿರ್ದೇಶಿಸುತ್ತಾರೆ ಎನ್ನುವ ಸುದ್ದಿ ಈಗ ಜೋರಾಗಿ ಎಲ್ಲೆಲ್ಲೂ ಹರಡಿದೆ.
ಈ ಚಿತ್ರದಲ್ಲಿ ಮತ್ತೊಂದು ಪ್ರಮುಖ ಆಕರ್ಷಣೆ ಇದೆ. ಅದೇನೆಂದರೆ ಐಶ್ವರ್ಯ ರೈ ಅಭಿನಯ. ಆಕೆ ಆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಂಡುಬರುತ್ತಾರೆ ಎನ್ನುವ ಸುದ್ದಿಯನ್ನು ಬಾಲಿವುಡ್ ಮೀಡಿಯಾಗಳು ಕಳೆದ ಒಂದೆರಡು ದಿನಗಳಿಂದ ಜಗತ್ತಿಗೆ ಸಾರುತ್ತಿದೆ. ಆ ಪ್ರಾಜಕ್ಟ್ ಸಧ್ಯದಲ್ಲೇ ಆರಂಭವಾಗುತ್ತದೆಂದು, ಐಶ್ವರ್ಯ ರೈ ಆ ಚಿತ್ರದಲ್ಲಿ ನಟಿಸಲು ಸಮ್ಮತಿ ಮುದ್ರೆ ನೀಡಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಐಶ್ವರ್ಯ ರೈ ಕಳೆದ ವರ್ಷ ಮಣಿರತ್ನಂ ಚಿತ್ರಗಳಲ್ಲಿ ನಟಿಸಲು ಕೆಲವು ಕಾರಣಗಳು ಅಡ್ಡ ಬಂದುದರಿಂದ ತಾನು ಆ ಪ್ರಾಜಕ್ಟ್ ನಲ್ಲಿ ಭಾಗವಹಿಸಲು ಆಗಲಿಲ್ಲ ಎಂದಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಜೊತೆ ಶ್ರುತಿ ಹಾಸನ್, ನಾಗಾರ್ಜುನ ಜೊತೆ ಐಶ್ವರ್ಯ ರೈ ನಟಿಸುವ ಬಗ್ಗೆ ಸಮಾಚಾರ ಹರಡಿದೆ. ಇದು ಮುಂದಿನ ವರ್ಷದಲ್ಲಿ ಸೆಟ್ ಏರುತ್ತದೆ ಎನ್ನುವ ಸುದ್ದಿ ಈಗ ಹೆಚ್ಚು ಬೆಲೆ ಕಂಡಿದೆ.