ರಿಯಾಲಿಟಿ ಶೋಗಳಿಗೆ ಹೋಗುವುದು ವೈಯಕ್ತಿಕ ಇಚ್ಛೆ: ಶಿವರಾಜ್ ಕುಮಾರ್

ಮಂಗಳವಾರ, 19 ಆಗಸ್ಟ್ 2014 (10:56 IST)
ಕಿರುತೆರೆಯಲ್ಲಿ ಸ್ಟಾರ್‌ಗಳ ನಿರೂಪಣೆ ವಿಚಾರವಾಗಿ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದು, ರಿಯಾಲಿಟಿ ಶೋಗಳು ತುಂಬಾ ವರ್ಷಗಳಿಂದ ನಡೆಯುತ್ತಿದೆ. ರಿಯಾಲಿಟಿ ಶೋಗಳಿಗೆ ಹೋಗುವುದು ವೈಯಕ್ತಿಕ ಇಚ್ಛೆ. ಎಲ್ಲ ನಟರಿಗೂ ವೈಯಕ್ತಿಕ ಇಚ್ಛೆ ಇರುತ್ತದೆ. ನಟರಿಗೆ ಸ್ವಾತಂತ್ರ್ಯ ನೀಡಬೇಕು ಎಂದು ನನಗನಿಸುತ್ತಿದೆ ಎಂದು ಹೇಳಿದ್ದಾರೆ.
 
ಕಿರುತೆರೆಯಲ್ಲಿ ಕಾರ್ಯಕ್ರಮ ನಿರೂಪಣೆ ಹಿನ್ನೆಲೆಯಲ್ಲಿ ಸುದೀಪ್ ಮತ್ತು ರಮೇಶ್  ಮೇಲೆ ನಿರ್ಬಂಧ ಹೇರುವುದಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಚಿಂತನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಹೇಳಿಕೆ ಹೊರಬಿದ್ದಿದೆ. ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಈ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಫಿಲಂ ಚೇಂಬರ್ ಸಭೆ ನಡೆಸಿದ್ದು, ಸಾಕಷ್ಟು ನಿರ್ಮಾಪಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
 
ಸುದೀಪ್ ಮತ್ತು ರಮೇಶ್ ಅವರು ರಿಯಾಲಿಟಿ ಷೋನಲ್ಲಿ ನಿರೂಪಣೆ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಪ್ರೇಕ್ಷಕರು ಚಲನಚಿತ್ರಗಳಿಗೆ ಬರುವುದು ಕಡಿಮೆಯಾಗಿದ್ದು, ನಿರ್ಮಾಪಕರು ಮತ್ತು ನಿರ್ದೇಶಕರಿಗೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಕಿರುತೆರೆಯಲ್ಲಿ ನಿರೂಪಣೆ ಮಾಡದಂತೆ ನಿರ್ಬಂಧ ಹೇರುವುದಕ್ಕೆ ಫಿಲ್ಮ್ ಚೇಂಬರ್‌ನಲ್ಲಿ ಚಿಂತನೆ ನಡೆಸಲಾಗುತ್ತಿದೆ. 
 

ವೆಬ್ದುನಿಯಾವನ್ನು ಓದಿ