ತಮ್ಮವರನ್ನು ನೋಡಲಾಗದೇ ಸಂಕಟ ಹೊರಹಾಕಿದ ಜಗ್ಗೇಶ್

ಮಂಗಳವಾರ, 11 ಆಗಸ್ಟ್ 2020 (10:31 IST)
ಬೆಂಗಳೂರು: ಕೊರೋನಾ ಎಂಬ ಮಹಾಮಾರಿ ಅದೆಷ್ಟೋ ಜನರಿಗೆ ತಮ್ಮ ಊರಿಗೆ ತೆರಳಲಾಗದೇ, ತಮ್ಮವರನ್ನು ನೋಡಲೂ ಆಗದೇ ಸಂಕಟ ತಂದಿಟ್ಟಿದೆ. ಆ ಸಂಕಟ ಈಗ ನವರಸನಾಯಕ ಜಗ್ಗೇಶ್ ಗೂ ತಟ್ಟಿದೆ.


ತಮ್ಮ ತವರೂರು ಮಾಯಸಂದ್ರ, ತುರುವೇಕೆರೆಯಲ್ಲೂ ಕೊರೋನಾ ಹರಡಿದ್ದು, ಇದೀಗ ಊರಿಗೆ ಹೋಗಲಾಗದೇ ಸಂಕಟ ಅನುಭವಿಸುತ್ತಿರುವುದಾಗಿ ಜಗ್ಗೇಶ್ ಹೇಳಿಕೊಂಡಿದ್ದಾರೆ.

ಕೊರೋನಾದಿಂದಾಗಿ ಈಗ ಮಾಯಸಂದ್ರಕ್ಕೆ ಹೊರಗಿನವರಿಗೆ ನಿಷೇಧ. ಇದರಿಂದಾಗಿ ತಮ್ಮ ರಾಮಣ್ಣ ಅಪ್ಪನ ಸಮಾಧಿ, ಕಾಲಭೈರವನ ದೇವಾಲಯ, ಚಿಕ್ಕಪ್ಪ ಯಾರನ್ನೂ ನೋಡಲಾಗದೇ ಸಂಕಟದಲ್ಲಿರುವೆ. ಎಲ್ಲ ಇದ್ದು ಏನೂ ಇಲ್ಲದಂತೆ ಆಗಿದೆ ಬದುಕು ಎಂದು ಬೇಸರಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ