ಜಗ್ಗೇಶ್ ಕೊಡುತ್ತಿದ್ದ ಕಾಟ ತಡೆಯಲಾಗದೇ ದೊಣ್ಣೆ ಹಿಡಿದಿದ್ದರಂತೆ ಪುಟ್ಟಣ್ಣ ಕಣಗಾಲ್

ಸೋಮವಾರ, 2 ಡಿಸೆಂಬರ್ 2019 (09:41 IST)
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಅವರಿಗೆ ನಿನ್ನೆ ಜನ್ಮ ದಿನವಾಗಿತ್ತು. ಈ ವೇಳೆ ಜಗ್ಗೇಶ್ ಸ್ವಾರಸ್ಯಕರ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ.


ಪುಟ್ಟಣ್ಣ ಕಣಗಾಲ್ ಅದೆಷ್ಟೋ ಸ್ಟಾರ್ ನಟರನ್ನು ಹುಟ್ಟು ಹಾಕಿದ ಶ್ರೇಷ್ಠ ತಂತ್ರಜ್ಞ. ಅವರ ಗರಡಿಯಲ್ಲಿ ಪಳಗಿದ ಎಷ್ಟೋ ನಟರಿದ್ದಾರೆ. ಅಂದೆಲ್ಲಾ ಅವಕಾಶ ಬೇಕೆಂದಾಗ ಪುಟ್ಟಣ್ಣ ಕಣಗಾಲ್ ಮನೆ ಮುಂದೆ ನಿಲ್ಲುತ್ತಿದ್ದ ಎಷ್ಟೋ ಕಲಾವಿದರಿದ್ದರು.

ಈ ಘಟನೆಗಳನ್ನು ನೆನೆನಸಿಕೊಂಡಿರುವ ಜಗ್ಗೇಶ್ ‘ಮಾನಸ ಸರೋವರ’ ಸಿನಿಮಾ ಚಿತ್ರೀಕರಣ ಸಂದರ್ಭವಾಗಿತ್ತು ಆಗ. ಪುಟ್ಟಣ್ಣ ಶಿಷ್ಯ ನಂಜುಂಡ ಅರಕಲಗೂಡು ನನ್ನ ಗೆಳೆಯನಾಗಿದ್ದ. ಅವನ ಮೂಲಕ ಪುಟ್ಟಣ್ಣ ಭೇಟಿ ಮಾಡಿದ್ದೆ. ನನಗೊಂದು ಪಾತ್ರ ಕೊಡಿಸಿ ಎಂದು ಪಾತ್ರ ಭಿಕ್ಷೆ ಬೇಡುತ್ತಿದ್ದೆ. ನನ್ನ ಕಾಟ ತಡೆಯಲಾಗದೇ ದೊಣ್ಣೆ ಹಿಡಿದು ಮೂರು ಮಹಡಿಯಿಂದ ಇಳಿದು ಓಡಿಸಿದ್ದರು. ನಾನು ಹೆದರಿ ಓಡಿದ್ದೆ’ ಎಂದು ಅಂದಿನ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ