ನಟ ಜಗ್ಗೇಶ್ ರಿಂದ ನಟಿ ಶ್ರುತಿ ಬಗ್ಗೆ ಆಕ್ಷೇಪಾರ್ಹ ಡೈಲಾಗ್ ವಿವಾದ

Krishnaveni K

ಶುಕ್ರವಾರ, 2 ಫೆಬ್ರವರಿ 2024 (11:15 IST)
Photo Courtesy: Twitter
ಬೆಂಗಳೂರು: ನವರಸನಾಯಕ ಜಗ್ಗೇಶ್ ನಾಯಕರಾಗಿರುವ ಮಠ ಗುರು ಪ್ರಸಾದ್ ನಿರ್ದೇಶನದ ರಂಗನಾಯಕ ಸಿನಿಮಾದ ಡೈಲಾಗ್ ಒಂದು ಈಗ ವಿವಾದಕ್ಕೆ ಗುರಿಯಾಗಿದೆ.

ಗುರು ಪ್ರಸಾದ್-ಜಗ್ಗೇಶ್ ಕಾಂಬಿನೇಷನ್ ನಲ್ಲಿ ಈ ಮೊದಲು ಮಠ ಎನ್ನುವ ಸಿನಿಮಾ ಮೂಡಿಬಂದಿತ್ತು. ಆ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಅದೇ ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನಲ್ಲಿ ರಂಗನಾಯಕ ಎನ್ನುವ ಸಿನಿಮಾ ಬರುತ್ತಿದ್ದು, ಫೆಬ್ರವರಿ 4 ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಗುರು ಪ್ರಸಾದ್ ಸಿನಿಮಾ ಎಂದರೆ ಡೈಲಾಗ್ ಗಳಿಗೇ ಫೇಮಸ್. ಆದರೆ ಅವರ ಡೈಲಾಗ್ ಈಗ ವಿವಾದಕ್ಕೆ ಕಾರಣವಾಗಿದೆ. ಅದೂ ಜಗ್ಗೇಶ್ ಕೈಯಲ್ಲಿ ‘ನಟಿ ಶ್ರುತಿ’ ಬಗ್ಗೆ ಹೇಳಿಸಿದ ಡೈಲಾಗ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ರಂಗನಾಯಕ ಹಾಡಿನಲ್ಲಿ ಅಂತಹದ್ದೇನಿದೆ?
ರಂಗನಾಯಕ ಸಿನಿಮಾದ ಹಾಡೊಂದು ಇಂದು ಸಂಜೆ ಬಿಡುಗಡೆಯಾಗಲಿದೆ. ಅದರ ತುಣುಕೊಂದನ್ನು ಚಿತ್ರತಂಡ ಹೊರಬಿಟ್ಟಿದೆ. ಈ ಹಾಡಿನಲ್ಲಿ ಸ್ಯಾಂಡಲ್ ವುಡ್ ನಟಿಯರ ಬಗ್ಗೆ ಸಾಲುಗಳನ್ನು ಬರೆಯಲಾಗಿದೆ. ಈ ಸಾಲುಗಳಲ್ಲಿ ನಟಿಯರನ್ನು ಕತ್ತೆಗೆ ಹೋಲಿಸಲಾಗಿದೆ ಎನ್ನಲಾಗಿದೆ. ಜೊತೆಗೆ ಜಗ್ಗೇಶ್ ಬಾಯಲ್ಲಿ ಶ್ರುತಿ ಮೀಟು ಶ್ರುತಿ ಎನ್ನುವ ಡೈಲಾಗ್ ಹೇಳಿಸಲಾಗಿದೆ. ಇದು ನಟಿ ಶ್ರುತಿ ಹರಿಹರನ್ ಮೀಟೂ ಪ್ರಕರಣಕ್ಕೆ ಟಾಂಗ್ ಕೊಡಲಾಗಿದೆ ಎನ್ನುವ ಅನುಮಾನವಿದೆ. ಈ ಹಾಡಿನ ಹಿಂದಿನ ವಿವಾದಾತ್ಮಕ ಅಂಶ ಇಂದು ಹಾಡು ಪೂರ್ತಿಯಾಗಿ ಕೇಳಿದ ಮೇಲಷ್ಟೇ ಗೊತ್ತಾಗಲಿದೆ.

ಆದರೆ ಹಾಡಿನ ಮೂಲಕ ನಟಿಯರಿಗೆ ಅವಮಾನ ಮಾಡಿದ್ದು ಸರಿಯಲ್ಲ ಎಂಬ ಮಾತು ಕೇಳಿಬರುತ್ತಿದೆ. ಸಾಮಾನ್ಯವಾಗಿ ಗುರು ಪ್ರಸಾದ್ ವಿವಾದಗಳಿಂದಲೇ ಸುದ್ದಿಯಾದವರು. ಇದೀಗ ತಮ್ಮ ಸಿನಿಮಾ ಸಾಲಿನ ಮೂಲಕ ವಿವಾದಕ್ಕೆ ಗುರಿಯಾಗುವ ಎಲ್ಲಾ  ಲಕ್ಷಣ ಕಾಣುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ