ಮೇಲುಕೋಟೆ ಮಂಜ ಜಗ್ಗೇಶ್ ಡಾರ್ಲಿಂಗು ಐಂದ್ರಿತಾ ರೇ

ಬುಧವಾರ, 16 ಜುಲೈ 2014 (11:57 IST)
ಜಗ್ಗೇಶ್ ನವರಸ ನಾಯಕ ಎನ್ನುವ ಹೆಸರು ಪಡೆದ ಪ್ರತಿಭಾವಂತ ನಟ, ಅವರು ಕೇವಲ ನಟನೆ ಆದ್ಯತೆ ನೀಡದೆ  'ಗುರು' ಚಿತ್ರದ ಮೂಲಕ ನಿರ್ದೇಶಕರಾದರು, ಮೊದಲ ಚಿತ್ರವನ್ನು ಪುತ್ರ ಗುರುರಾಜ್ ಅವರಿಗೆಂದು ನಿರ್ದೇಶಿಸಿದರು. ಈ ಮುಖಾಂತರ ಪೂರ್ಣ ಪ್ರಮಾಣದ ನಿರ್ದೇಶಕರಾದರು ಜಗ್ಗೇಶ್. 


ಅದಾದ ಬಳಿಕ ಡೈರೆಕ್ಟರ್ ಸೀಟ್ ಮೇಲೆ ಕುಳಿತಿರಲಿಲ್ಲ. ಈಗ ಮತ್ತೆ ಆ ಸ್ಥಾನ ತುಂಬುವ ಯೋಜನೆಯಲ್ಲಿ ಇದ್ದಾರೆ ಜಗ್ಗೇಶ್. ಮೇಲುಕೋಟೆ ಮಂಜ ಚಿತ್ರ ನಿರ್ದೇಶಿಸುವುದಲ್ಲದೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ . ಆ ಚಿತ್ರಕ್ಕೆ  ಜಗ್ಗೇಶ್ ಜೊತೆ ಡ್ಯುಯೆಟ್  ಹಾಡೋಕೆ ಐಂದ್ರಿತಾ ರೇ ಸಿದ್ಧ ಆಗಿದ್ದಾರೆ.  ಮೇಲುಕೋಟೆ ಮಂಜನ ಮಂಜಿ ಯಾಗಿದ್ದಾರೆ ಆಂಡಿ ರೇ!   
 
ಕಾಮಿಡಿ ಹೂರಣ ಹೊಂದಿರುವ ಸಿನಿಮಾ. ಜಗ್ಗೇಶ್ ವಾಸ್ತುಪ್ರಕಾರ ಚಿತ್ರದಲ್ಲಿ ನಟಿಸಿದ್ದಾರೆ. ಅವರ 'ಸಾಫ್ಟ್ವೇರ್ ಗಂಡ' ಇನ್ನೇನು  ತೆರೆ ಏರಲು ಕಾಯುತ್ತಿದೆ. ಇವುಗಳ ಜೊತೆಗೆ ಮೇಲುಕೋಟೆ ಮಂಜನ ಕೆಲಸವೂ ಸಹ ನಿಧಾನವಾಗಿ ಸಾಗುತ್ತಿದೆ. . 

ವೆಬ್ದುನಿಯಾವನ್ನು ಓದಿ