ಕಳೆದ ಕೆಲವು ದಿನಗಳ ಹಿಂದೆ, ಪಳನಿಸ್ವಾಮಿ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಮಲ್ ಹಾಸನ್ ಆರೋಪ ಮಾಡಿದ್ದರು. ಕಮಲ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಪಳನಿಸ್ವಾಮಿ ಅವರಿಗೆ ರಾಜಕೀಯ ಗೊತ್ತಿಲ್ಲ ಎಂದಿದ್ದರು.
ಅವರು ನಟನೆಯನ್ನು ಮಾಡುತ್ತಿದ್ದಾರೆ. ರಾಜಕೀಯದ ಬಗ್ಗೆ ತಿಳಿದಿಲ್ಲ, ಅವರು ರಾಜಕೀಯಕ್ಕೆ ಬಂದಾಗ ಆರೋಪಗಳನ್ನು ಮಾಡಬಹುದು, ನಾವು ಅವರಿಗೆ ಸೂಕ್ತವಾದ ಪ್ರತಿಕ್ರಿಯೆಯನ್ನು ನೀಡುತ್ತೇವೆ ಎಂದು ಟಾಂಗ್ ನೀಡಿದ್ದರು.