ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಉಳಗನಾಯಗನ್ ಕಮಲ್ ಹಾಸನ್

ಸೋಮವಾರ, 17 ನವೆಂಬರ್ 2014 (12:40 IST)
ಕಮಲ್ ಹಾಸನ್ ಕೇವಲ ಭಾರತಿಯ ಚಿತ್ರರಂಗದ  ಕಲಾವಿದ ಅಲ್ಲ. ಅವರು ವಿಶ್ವಮಾನ್ಯ ನಟ.  ಭಾರತೀಯರು ಸದಾ ಹೆಮ್ಮೆ ಪಡುವಂತಹ ನಟ ಅವರು. ಅವರು ವಿಶ್ವಮಾನ್ಯ ಹೀರೋ ಎಂದು ತಮ್ಮ ಅಭಿನಯದ ಮೂಲಕ ನಿರೂಪಿಸಿದ್ದಾರೆ. ಈಗ ಕಮಲ್ ಹಾಸನ್ ಅವರ ಮೂರು ಚಿತ್ರಗಳು ಬಿಡುಗಡೆಯತ್ತ ಇವೆ. ಅದರಲ್ಲಿ ವಿಶ್ವರೂಪಂ 2 ಕೆಲಸ ಸಂಪೂರ್ಣಗೊಂಡು ಅದು ಈಗ ಬಿಡುಗಡೆಯತ್ತ ಸಿದ್ಧವಾಗಿದೆ. 
 
ಇನ್ನು  ರಮೇಶ್ ಅರವಿಂದ್ ನಿರ್ದೇಶನದ ಉತ್ತಮ ವಿಲನ್ ಚಿತ್ರವೂ ಸಧ್ಯದಲ್ಲೇ ಬಿಡುಗಡೆ ಆಗಲಿದೆ. ಅಲ್ಲದೆ ಮಲೆಯಾಳಂ ಸೂಪರ್ ಹಿಟ್ ಚಿತ್ರ  ದೃಷ್ಯಂ ಈಗ ತಮಿಲಿಲ್ನಲ್ಲಿ ಪಾಪನಾಸನಂ ಹೆಸರಿನ ಮೂಲಕ ಸಿದ್ಧ ಆಗಿದೆ. ಅದರ ಮೆನ್ ರೋಲ್ ಸಹಿತ ಕಮಲ್ ಹಾಸನ್ ಮಾಡಿದ್ದಾರೆ. ಆ ಚಿತ್ರ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಇವೆಲ್ಲದರ ನಡುವೆ ಬಂದಿರುವ ಸುದ್ದಿ ಅಂದರೆ  ಕಮಲ್ ಈಗ ಐತಿಹಾಸಿಕ ನಾಯಕನ ಅಭಿನಯ ಮಾಡುವತ್ತ ಗಮನ ನೆಟ್ಟಿದ್ದಾರೆ. ಆ ಸಂಗತಿಯ ಬಗ್ಗೆ ಕಾಲಿವುಡ್ ನಲ್ಲಿ ಮಾತುಕತೆ ಕೇಳಿ  ಬರುತ್ತಿವೆ.  
 
ಪ್ರಯೋಗಾತ್ಮಕ ಸಿನಿಮಾಗಳ ಬಗ್ಗೆ ಅಧಿಕ ಆದ್ಯತೆ ನೀಡುವ ಕಮಲ್ ಈಗ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಅವರ ಬದುಕಿನ ಕಥನವನ್ನು ತೆರೆಯ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಸಂಬಂಧಪಟ್ಟ ಸ್ಕ್ರಿಪ್ಟ್ ವರ್ಕ್ ಆರಂಭ ಆಗಿದೆ ಎನ್ನುವ ಸಂಗತಿ ಹರಡಿದೆ ಕಾಲಿವುಡ್ ನಲ್ಲಿ. ಇದರಲ್ಲಿ ಕಮಲ್ ಟೈಟಲ್ ರೋಲ್ ಮಾಡುತ್ತಿದ್ದಾರೆ. ತನ್ನ ಸ್ವಂತ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲಿಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುವುದಕ್ಕೆ ಆದ್ಯತೆ ನೀಡಿದ್ದಾರೆ ಕಮಲ್. ಕನ್ನಡದ ಹುಲಿ ತಮಿಳಿನಲ್ಲಿ ಹೂಂಕರಿಸುವುದನ್ನು ನೋಡುವ ಸೌಭಾಗ್ಯ ನಮಗೆ!
 

ವೆಬ್ದುನಿಯಾವನ್ನು ಓದಿ