ದಯವಿಟ್ಟು ರಾಗ ಚಿತ್ರಕ್ಕೆ ಒಂದೇ ಒಂದು ಶೋ ಕೊಡಿ: ಮಿತ್ರಾ ಅಳಲು

ಗುರುವಾರ, 27 ಏಪ್ರಿಲ್ 2017 (11:21 IST)
ಬಾಹುಬಲಿ-2 ಚಿತ್ರಕ್ಕಾ ಕನ್ನಡದ ಚಿತ್ರ ರಾಗ ಎತ್ತಂಗಡಿಗೆ ಸಿದ್ಧತೆ ನಡೆದಿದೆ. ಇದರಿಂದ ನೊಂದು ಆಸ್ಪತ್ರೆಗೆ ದಾಖಲಾಗಿದ್ದ ನಟ ಮತ್ತು ನಿರ್ಮಾಪಕ ಮಿತ್ರಾ ಮಾಧ್ಯಮಗಳ ಜೊತೆ ನೋವು ತೋಡಿಕೊಂಡಿದ್ದಾರೆ. ನೂರಾರು ಸ್ಕ್ರೀನ್`ಗಳಲ್ಲಿ ಬಾಹುಬಲಿ ರಿಲೀಸ್ ಆಗುತ್ತಿದೆ. ನಮ್ಮ  ಚಿತ್ರಕ್ಕೆ ಒಂದೇ ಒಂದು ಸ್ಕ್ರೀನ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕನ್ನಡಕ್ಕಾಗಿ ಒಂದು ಸದಭಿರುಚಿಯ ಚಿತ್ರ ಮಾಡಿದ್ದೇವೆ. ಜನ ನಮ್ಮ ಚಿತ್ರವನ್ನ ಒಪ್ಪಿಕೊಂಡಿದ್ದಾರೆ. ಅದನ್ನ ಮುಂದುವರೆಸಲು ಬಿಡಿ. ಕರ್ನಾಟಕದಲ್ಲಿ ಕನ್ನಡ ಚಿತ್ರಕ್ಕೆ ಪ್ರೋತ್ಸಾಹ ಕೊಡಿ ಎಂದು ನೋವು ತೋಡಿಕೊಂಡಿದ್ದಾರೆ.

ನಿರ್ದೇಶಕ ಶೇಖರ್ ಸಹ ಅತೀವ ದುಃಖ ತೋಡಿಕೊಂಡಿದ್ದಾರೆ. ನಾವು ಹಣಕ್ಕಾಗಿ ಚಿತ್ರ ಮಾಡಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಚಿತ್ರ ಹೆಸರು ಮಾಡುವುದು ನಮ್ಮ ಉದ್ದೇಶ. ಒಂದೇ ಒಂದು ಸ್ಕ್ರೀನ್ ಕೊಡಿ ಎಂದು ಹಲವು ಬಾರಿ ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ