ಇದಲ್ಲದೆ ಕಳೆದ ವಾರ ಕಂಠೀರವ ಸ್ಟುಡಿಯೋದಲ್ಲಿ ಹಾಕಿದ್ದ ಅದ್ಧೂರಿ ಸೆಟ್ನಲ್ಲಿ ಚಂದನ್ಶೆಟ್ಟಿ, ನಾಯಕನಟ ರವಿಕುಮಾರ್, ಅಕ್ಷಯ್ ಮತ್ತು ರಚನಾ ಅಭಿನಯಿಸಿದ ‘ಏನೇ ಬರಲಿ ಡ್ಯಾಮ್ ಐ ಡೋಂಟ್ ಕೇರ್’, ‘ನಾನಾಡೋ ಮಾತುಗಳು ಎಲ್ಲಾ ಫೇರ್’ ಎಂಬ ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು. ಇದರೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.
ಬೇಟೆ, ಅಂಗಾರಕ, ಯಾರದು ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀನಿವಾಸ್ ಕೌಶಿಕ್ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಶ್ಯಾಂ ಸಿಂಧನೂರು ಛಾಯಾಗ್ರಹಣ, ಸತೀಶ್ ಬಾಬು ಸಂಗೀತ, ಸಂಜೀವರೆಡ್ಡಿ ಸಂಕಲನ, ಕೌರವ ವೆಂಕಟೇಶ್ ಸಾಹಸ, ರವಿಕುಮಾರ್ ಕಥೆ, ಜಾನಪದ ಸಾಹಿತ್ಯ ಮತ್ತು ಸಹನಿರ್ದೇಶನ ಇದೆ.
ಸುರೇಶ್ ಕಣ್ಣ ಸಹ ನಿರ್ಮಾಪಕರಾಗಿದ್ದು, ಕಂಬಿರಾಜ್, ಜಗ್ಗು ನೃತ್ಯ ನಿರ್ದೇಶನವಿದೆ. ರವಿಕುಮಾರ್, ನೀತು, ರಚನಾ, ಯತಿರಾಜ್, ಗಿರೀಶ್ ಜತ್ತಿ, ಪ್ರಭಾಕರ್ ಎಂ. ಸಂಗೀತ, ಚಂದ್ರಕಾಂತ್, ಮೈಕೋ ಶಿವು, ಮಾರುತಿರಾಜ್ ಇನ್ನು ಮುಂತಾದವರ ತಾರಾಬಳಗವಿದೆ. ಬ್ರೈಟ್ಕಟ್ ಸಿನಿ ಲಾಂಛನದಲ್ಲಿ ಪ್ರಭಾಕರ್ ಎಂ. ನಿರ್ಮಿಸುತ್ತಿರುವ ಮೊಂಬತ್ತಿ ಚಿತ್ರಕ್ಕೆ ಇತ್ತೀಚೆಗೆ, ಸಕಲೇಶಪುರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.