ಕಾರ್ಯಕ್ರಮದಲ್ಲಿ ವಿ ರವಿಚಂದ್ರನ್, ಪುನೀತ್ ರಾಜ್ ಕುಮಾರ್, ರಾಧಿಕ ಪಂಡಿತ್, ದುನಿಯಾ ವಿಜಯ್, ಕನಕಪುರ ಶ್ರೀನಿವಾಸ್, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ವಿ ಹರಿ ಕೃಷ್ಣ , ಚಿತ್ರದ ನಾಯಕ ಸಂತೋಷ್ ಮತ್ತು ನಾಯಕಿ ಮನ್ವಿತ ಕಾರ್ಯಕ್ರಮದ ರಸರಂಜೆಯ ಭಾಗವಾಗಿದ್ದರು.
ಜಯಂತ್ ಕಾಯ್ಕಿಣಿ ಅವರು ಬರೆದಿರುವ ಹಾಡಿನಲ್ಲಿ ಕೆಲವು ಹೂಗಳ ಹೆಸರನ್ನು ತಿಳಿಸಿದ್ದಾರಂತೆ. ಆ ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವ ಹರಿಕೃಷ್ಣ ಅವರು ಈ ಸಮಯದಲ್ಲಿ ನೆನಪು ಮಾಡಿಕೊಂಡರು. ಹೊಸಬರಿಗೆ ಅವಕಾಶ ನೀಡಿರುವ ಸೂರಿ ಅವರು ಈ ಚಿತ್ರದಲ್ಲಿ ಹೊಸತನ ನೀಡಲು ಸಿದ್ಧರಾಗಿದ್ದಾರೆ. ಅಪರೂಪದ ಹಾಡುಗಳು ಚಿತ್ರದ ಮುಖ್ಯಾಂಶವಾಗಿದ್ದು , ಈಗ ಹೊಸಬರ ನಟನೆಯೂ ಜೊತೆ ಸೇರಿದೆ. ಹೊಸ ಪ್ರತಿಭೆಗಳು ಮತ್ತಷ್ಟು ಬಂದು ಕನ್ನಡ ಚಿತ್ರರಂಗವನ್ನು ಬೆಳಗಿಸಲಿ ಎನ್ನುವ ಹಾರೈಕೆ ನಮ್ಮದು .