ಜನರ ಮುಂದೆ ಸೂರಿ ನಿರ್ದೇಶನದ ಕೆಂಡ ಸಂಪಿಗೆ ಹಾಡುಗಳು

ಮಂಗಳವಾರ, 28 ಜುಲೈ 2015 (10:14 IST)
ಸೂರಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕೆಂಡಸಂಪಿಗೆಯ ಹಾಡುಗಳನ್ನು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಮತ್ತು ಡಿ ಬೀಟ್ಸ್ ಮುಖ್ಯಸ್ಥೆ ಶೈಲಜಾ ನಾಗ್ ಅವರು ಬಿಡುಗಡೆ ಮಾಡಿದರು. ಬೆಂಗಳೂರು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಈ ಕಾರ್ಯಕ್ರಮ ನಡೆಯಿತು. 
ಕಾರ್ಯಕ್ರಮದಲ್ಲಿ ವಿ ರವಿಚಂದ್ರನ್, ಪುನೀತ್ ರಾಜ್ ಕುಮಾರ್, ರಾಧಿಕ ಪಂಡಿತ್, ದುನಿಯಾ ವಿಜಯ್, ಕನಕಪುರ ಶ್ರೀನಿವಾಸ್, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ವಿ ಹರಿ ಕೃಷ್ಣ , ಚಿತ್ರದ ನಾಯಕ ಸಂತೋಷ್ ಮತ್ತು ನಾಯಕಿ  ಮನ್ವಿತ ಕಾರ್ಯಕ್ರಮದ ರಸರಂಜೆಯ ಭಾಗವಾಗಿದ್ದರು.
 
ಜಯಂತ್ ಕಾಯ್ಕಿಣಿ ಅವರು ಬರೆದಿರುವ  ಹಾಡಿನಲ್ಲಿ ಕೆಲವು ಹೂಗಳ ಹೆಸರನ್ನು ತಿಳಿಸಿದ್ದಾರಂತೆ. ಆ ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವ ಹರಿಕೃಷ್ಣ ಅವರು ಈ ಸಮಯದಲ್ಲಿ ನೆನಪು ಮಾಡಿಕೊಂಡರು. ಹೊಸಬರಿಗೆ ಅವಕಾಶ ನೀಡಿರುವ ಸೂರಿ ಅವರು ಈ ಚಿತ್ರದಲ್ಲಿ ಹೊಸತನ ನೀಡಲು ಸಿದ್ಧರಾಗಿದ್ದಾರೆ. ಅಪರೂಪದ ಹಾಡುಗಳು ಚಿತ್ರದ ಮುಖ್ಯಾಂಶವಾಗಿದ್ದು , ಈಗ ಹೊಸಬರ ನಟನೆಯೂ ಜೊತೆ ಸೇರಿದೆ. ಹೊಸ ಪ್ರತಿಭೆಗಳು ಮತ್ತಷ್ಟು ಬಂದು ಕನ್ನಡ ಚಿತ್ರರಂಗವನ್ನು ಬೆಳಗಿಸಲಿ ಎನ್ನುವ ಹಾರೈಕೆ ನಮ್ಮದು . 

ವೆಬ್ದುನಿಯಾವನ್ನು ಓದಿ