ಮುಂದಿನ ವಾರ ಹರಡಲಿದೆ ಕೆಂಡಸಂಪಿಗೆಯ ಪರಿಮಳ

ಶನಿವಾರ, 29 ಆಗಸ್ಟ್ 2015 (10:41 IST)
ಸ್ಯಾಂಡಲ್ ವುಡ್ ವಿನ್ನಿಂಗ್ ಹಾರ್ಸ್ ಡೈರೆಕ್ಟರಲ್ಲಿ ದುನಿಯಾ ಸೂರಿ ಒಬ್ಬರು. ಹೊಸ ಪ್ರತಿಭೆಗಳ್ನ ಹಾಕ್ಕೊಂಡು ಹೇಗೆ ಸಿನಿಮಾ ಗೆಲ್ಲಿಸಬೇಕು ಅನ್ನೋ ಫಾರ್ಮುಲಾ ಗೊತ್ತಿರೋ ನಿರ್ದೇಶಕ. ಈಗ ಇಂತಹದ್ದೇ ರಿಯಲ್ ಸ್ಟೋರಿಗೆ ಹೊಸ ಟೀಂ ಒಂದನ್ನ ರೆಡಿ ಮಾಡ್ಕೊಂಡು ಸಿನಿಮಾ ಮಾಡಿದ್ದಾರೆ. ಅದೇ ಕೆಂಡಸಂಪಿಗೆ ಗಿಣಿಮರಿ ಕೇಸ್ ಜರ್ನಿ. ಇದೀಗ ಗಿಣಿಮರಿ ಕೇಸ್ ಥಿಯೇಟರ್ ಗೆ ಹಾರಿಬರಲು ರೆಡಿಯಾಗಿದೆ. 
ಹೊಸ ನಾಯಕ ವಿಕ್ಕಿ, ಹೊಸ ನಾಯಕಿ ಮಾನ್ವಿತರನ್ನ ಪರಿಚಯಿಸ್ತಿರೋ ಸೂರಿ ಪಕ್ಕಾ ಕಮರ್ಷಿಯಲ್ ಸಿನಿಮಾವನ್ನ ಮಾಡಿದ್ದಾರೆ. ಅಪರಾಧ ಜಗತ್ತಿನ ನವಿರು ಪ್ರೇಮಕಾವ್ಯವೇ ಗಿಣಿಮರಿ ಕೇಸ್. ಇದರ ಸಬ್ ಟೈಟಲ್ ಹಿಂದೆ ಕೂಡ ಇಂಟರೆಸ್ಟಿಂಗ್ ಮ್ಯಾಟರ್ ಇದೆ. ಅದೇನಪ್ಪಾ ಅಂದ್ರೆ ಈ ಸಬ್ ಟೈಟಲ್ ಕೊಟ್ಟಿದ್ದು ಪೊಲೀಸ್ ಅಧಿಕಾರಿ. ಕರ್ನಾಟಕ 18ಜಿಲ್ಲೆಗಳಲ್ಲಿ ಚಿತ್ರದ ಶೂಟಿಂಗ್ ನಡೆದಿದೆ. ಅದ್ಭುತ ದೃಶ್ಯಕಾವ್ಯವನ್ನ ಕಟ್ಟಿಕೊಡುವಲ್ಲಿ ಸೂರಿ ಯಶಸ್ವಿಯಾಗಿದ್ದಾರೆ.
 
ಈಗಾಗ್ಲೇ ಹರಿಕೃಷ್ಣರ ಮ್ಯೂಸಿಕ್ ಸಖತ್ ಹಿಟ್ ಆಗಿದೆ. ಜಯಂತ್ ಕಾಯ್ಕಿಣಿ ಮತ್ತು ಭಟ್ಟರು ಬರೆದಿರೋ ಸಾಲುಗಳು ಎಲ್ಲರ ಬಾಯಲ್ಲಿ ನಲಿದಾಡ್ತಿದೆ. ಮುಂದಿನವಾರ ಗಿಣಿಮರಿ ಕೇಸ್ ಜರ್ನಿ ಶುರುವಾಗಲಿದೆ. ಈಗಾಗ್ಲೇ ಹೊಸ ಪ್ರತಿಭೆಗಳನ್ನ ಸ್ಯಾಂಡಲ್ ವುಡ್ ನಲ್ಲಿ ಶೈನ್ ಮಾಡಿಸಿ ಗೆದ್ದಿರೋ ಸೂರಿ, ಇದೀಗ ಹೊಸ ಪ್ರತಿಭೆಗಳನ್ನ ಹಾಕಿಕೊಂಡು ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡಿ ಥಿಯೇಟರ್ ಗೆ ಬರೋದಕ್ಕೆ ರೆಡಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ